Sunday 24 October 2021

ಜಾಗ್ರತ ಪಂಚಕಮ್ ಆದಿ ಶಂಕರಾಚಾರ್ಯ ಕೃತಂ jagrata panchakam by adi shankaracharya

 jagrata panchakam


 ಎಚ್ಚರಿಕೆಯ ಏಳು ಗಂಟೆಗಳು !!!


ಆದಿ ಶಂಕರಾಚಾರ್ಯ ವಿರಚಿತ :


-೧-


ಮಾತಾ ನಾಸ್ತಿ ಪಿತಾ ನಾಸ್ತಿ, ನಾಸ್ತಿ ಬಂಧು ಸಹೋದರ:|

ಅರ್ಥಂ ನಾಸ್ತಿ ಗೃಹಂ ನಾಸ್ತಿ " 

ತಸ್ಮಾತ್ ಜಾಗ್ರತ ಜಾಗ್ರತ"||


ತಾಯಿ-ತಂದೆ,ಬಂಧು-ಸಹೋದರ, ಹಣ, ಮನೆ, ಯಾವುದೂ ಸತ್ಯವಲ್ಲ , ಆದ್ದರಿಂದ ಹುಷಾರಾಗಿರಿ, ಎಚ್ಚರಿಕೆ, ಎಚ್ಚರಿಕೆ!!


-೨- 


ಜನ್ಮ ದು:ಖಂ ಜರಾ ದುಖಂ, ಜಾಯಾ ದು:ಖಂ ಪುನ: ಪುನ:|ಸಂಸಾರ ಸಾಗರಂ ದುಖಂ,

ತಸ್ಮಾತ್ ಜಾಗ್ರತ ಜಾಗ್ರತ||


ಜನ್ಮವೂ ದು:ಖವೇ, ಮುಪ್ಪೂ ದು:ಖವೇ, ಪತ್ನಿಯೂ ದು:ಖವೇ, ಇಷ್ಟೇ ಏಕೆ? ಸಂಸಾರ ಸಾಗರವೇ ದು:ಖ,ನೆನಪಿರಲಿ,ಎಚ್ಚರಿಕೆ, ಎಚ್ಚರಿಕೆ!!


-೩-


ಕಾಮ: ಕ್ರೋಧಶ್ಚ ಲೋಭಶ್ಚ ದೇಹೇ ತಿಷ್ಠಂತಿ ತಸ್ಕರಾ:|

ಜ್ಞಾನರತ್ನಾಪಹಾರಾಯ 

ತಸ್ಮಾತ್ ಜಾಗ್ರತ ಜಾಗ್ರತ||


ಕಾಮಕ್ರೋಧಗಳೆಂಬ ಕಳ್ಳರು ನಿನ್ನೊಳಗೇ ಇರುವ ಜ್ಞಾನರತ್ನವನ್ನು ಅಪಹರಿಸುವುದಕ್ಕಾಗಿ ಹೊಂಚುಹಾಕುತ್ತಿದ್ದಾರೆ.ಎಚ್ಚರಿಕೆ, ಎಚ್ಚರಿಕೆ!!


-೪-


ಆಶಯಾ ಬಧ್ಯತೇ ಲೋಕ: ಕರ್ಮಣಾ ಬಹು ಚಿಂತಯಾ|

ಆಯು: ಕ್ಷೀಣಂ ನ ಜಾನಾತಿ 

ತಸ್ಮಾತ್ ಜಾಗ್ರತ ಜಾಗ್ರತ||


ಆಶೆಯಿಂದ, ಕರ್ಮದಿಂದ,ಚಿಂತೆಯಿಂದ ಮನುಷ್ಯನು ಬದ್ಧನಾಗಿರುತ್ತಾನೆ. ಆಯುಷ್ಯವು ಸವೆಯುತ್ತಿದ್ದರೂ ಅದನ್ನು ಗಮನಿಸುತ್ತಿಲ್ಲ,ಎಚ್ಚರಿಕೆ, ಎಚ್ಚರಿಕೆ!!


-೫-


ಸಂಪದ: ಸ್ವಪ್ನಸಂಕಾಶಾ:,ಯೌವನಂ ಕುಸುಮೋಪಮಮ್|

ವಿದ್ಯುಚ್ಚಂಚಲಮಾಯುಷ್ಯಂ 

ತಸ್ಮಾತ್ ಜಾಗ್ರತ ಜಾಗ್ರತ||


ಸಂಪತ್ತು ಸ್ವಪ್ನಸಮಾನ, ಯೌವನವು ಹೂವಿನಂತೆ ಬಾಡುತ್ತಿದೆ, ಆಯುಷ್ಯವಂತೂ ಮಿಂಚಿನಂತೆ ಹಾರಿಹೋಗುತ್ತಿದೆ,ಎಚ್ಚರಿಕೆ, ಎಚ್ಚರಿಕೆ!!


-೬-


ಕ್ಷಣಂ ವಿತ್ತಂ, ಕ್ಷಣಂ ಚಿತ್ತಂ,ಕ್ಷಣಂ ಜೀವಿತಮೇವಚ|

ಯಮಸ್ಯ ಕರುಣಾ ನಾಸ್ತಿ,

ತಸ್ಮಾತ್ ಜಾಗ್ರತ ಜಾಗ್ರತ||


ವಿತ್ತ, ಚಿತ್ತ,ಜೀವಿತ ಎಲ್ಲವೂ ಕ್ಷಣಿಕವೇ.ಯಮನಿಗೆ ದಯೆ ಎಂಬುದಿಲ್ಲ,ಆದ್ದರಿಂದ ಎಚ್ಚರಿಕೆ, ಎಚ್ಚರಿಕೆ!!


-೭-


ಅನಿತ್ಯಾಣಿ ಶರೀರಾಣಿ ವಿಭವೋ ನೈವ ಶಾಶ್ವತಾ:|

ನಿತ್ಯಂ ಸನ್ನಿಹಿತೋ ಮೃತ್ಯು:, 

ತಸ್ಮಾತ್ ಜಾಗ್ರತ ಜಾಗ್ರತ||


ದೇಹಗಳು ಅನಿತ್ಯ,ಸಂಪತ್ತೆಲ್ಲವೂ ಅಶಾಶ್ವತ, ಮರಣವು ಹತ್ತಿರದಲ್ಲಿದೆ,ಆದ್ದರಿಂದ ಎಚ್ಚರಿಕೆ, ಎಚ್ಚರಿಕೆ!!

***



No comments:

Post a Comment