Showing posts with label ನಾರಾಯಣ ನಾರಾಯಣ ಜಯ ಗೋವಿಂದ ಶಂಕರಾಚಾರ್ಯ ಕೃತಂ NARAYANA STOTRAM. Show all posts
Showing posts with label ನಾರಾಯಣ ನಾರಾಯಣ ಜಯ ಗೋವಿಂದ ಶಂಕರಾಚಾರ್ಯ ಕೃತಂ NARAYANA STOTRAM. Show all posts

Wednesday, 1 December 2021

ನಾರಾಯಣ ನಾರಾಯಣ ಜಯ ಗೋವಿಂದ ನಾರಾಯಣ ಸ್ತೋತ್ರಮ್ ಆದಿ ಶಂಕರಾಚಾರ್ಯ ಕೃತಂ NARAYANA NARAYANA JAYA GOVINDA NARAYANA STOTRAM by adi shankaracharya




ನಾರಾಯಣ ನಾರಾಯಣ ಜಯ ಗೋವಿಂದ ಹರೇ ||

ನಾರಾಯಣ ನಾರಾಯಣ ಜಯ ಗೋಪಾಲ ಹರೇ ||

ಕರುಣಾಪಾರಾವಾರ ವರುಣಾಲಯಗಂಭೀರ ನಾರಾಯಣ || 1 ||
ಘನನೀರದಸಂಕಾಶ ಕೃತಕಲಿಕಲ್ಮಷನಾಶನ ನಾರಾಯಣ || 2 ||

ಯಮುನಾತೀರವಿಹಾರ ಧೃತಕೌಸ್ತುಭಮಣಿಹಾರ ನಾರಾಯಣ || 3 ||
ಪೀತಾಂಬರಪರಿಧಾನ ಸುರಕಳ್ಯಾಣನಿಧಾನ ನಾರಾಯಣ || 4 ||

ಮಂಜುಲಗುಂಜಾಭೂಷ ಮಾಯಾಮಾನುಷವೇಷ ನಾರಾಯಣ || 5 ||
ರಾಧಾಧರಮಧುರಸಿಕ ರಜನೀಕರಕುಲತಿಲಕ ನಾರಾಯಣ || 6 ||

ಮುರಳೀಗಾನವಿನೋದ ವೇದಸ್ತುತಭೂಪಾದ ನಾರಾಯಣ || 7 ||
ಬರ್ಹಿನಿಬರ್ಹಾಪೀಡ ನಟನಾಟಕಫಣಿಕ್ರೀಡ ನಾರಾಯಣ || 8 ||

ವಾರಿಜಭೂಷಾಭರಣ ರಾಜೀವರುಕ್ಮಿಣೀರಮಣ ನಾರಾಯಣ || 9 ||
ಜಲರುಹದಳನಿಭನೇತ್ರ ಜಗದಾರಂಭಕಸೂತ್ರ ನಾರಾಯಣ || 10 ||

ಪಾತಕರಜನೀಸಂಹಾರ ಕರುಣಾಲಯ ಮಾಮುದ್ಧರ ನಾರಾಯಣ || 11 ||
ಅಘ ಬಕಹಯಕಂಸಾರೇ ಕೇಶವ ಕೃಷ್ಣ ಮುರಾರೇ ನಾರಾಯಣ || 12 ||

ಹಾಟಕನಿಭಪೀತಾಂಬರ ಅಭಯಂ ಕುರು ಮೇ ಮಾವರ ನಾರಾಯಣ || 13 ||
ದಶರಥರಾಜಕುಮಾರ ದಾನವಮದಸಂಹಾರ ನಾರಾಯಣ || 14 ||

ಗೋವರ್ಧನಗಿರಿ ರಮಣ ಗೋಪೀಮಾನಸಹರಣ ನಾರಾಯಣ || 15 ||
ಸರಯುತೀರವಿಹಾರ ಸಜ್ಜನ//ಋಷಿಮಂದಾರ ನಾರಾಯಣ || 16 ||

ವಿಶ್ವಾಮಿತ್ರಮಖತ್ರ ವಿವಿಧವರಾನುಚರಿತ್ರ ನಾರಾಯಣ || 17 ||
ಧ್ವಜವಜ್ರಾಂಕುಶಪಾದ ಧರಣೀಸುತಸಹಮೋದ ನಾರಾಯಣ || 18 ||

ಜನಕಸುತಾಪ್ರತಿಪಾಲ ಜಯ ಜಯ ಸಂಸ್ಮೃತಿಲೀಲ ನಾರಾಯಣ || 19 ||
ದಶರಥವಾಗ್ಧೃತಿಭಾರ ದಂಡಕ ವನಸಂಚಾರ ನಾರಾಯಣ || 20 ||

ಮುಷ್ಟಿಕಚಾಣೂರಸಂಹಾರ ಮುನಿಮಾನಸವಿಹಾರ ನಾರಾಯಣ || 21 ||
ವಾಲಿವಿನಿಗ್ರಹಶೌರ್ಯ ವರಸುಗ್ರೀವಹಿತಾರ್ಯ ನಾರಾಯಣ || 22 ||

ಮಾಂ ಮುರಳೀಕರ ಧೀವರ ಪಾಲಯ ಪಾಲಯ ಶ್ರೀಧರ ನಾರಾಯಣ || 23 ||
ಜಲನಿಧಿ ಬಂಧನ ಧೀರ ರಾವಣಕಂಠವಿದಾರ ನಾರಾಯಣ || 24 ||

ತಾಟಕಮರ್ದನ ರಾಮ ನಟಗುಣವಿವಿಧ ಸುರಾಮ ನಾರಾಯಣ || 25 ||
ಗೌತಮಪತ್ನೀಪೂಜನ ಕರುಣಾಘನಾವಲೋಕನ ನಾರಾಯಣ || 26 ||

ಸಂಭ್ರಮಸೀತಾಹಾರ ಸಾಕೇತಪುರವಿಹಾರ ನಾರಾಯಣ || 27 ||
ಅಚಲೋದ್ಧೃತಚಂಚತ್ಕರ ಭಕ್ತಾನುಗ್ರಹತತ್ಪರ ನಾರಾಯಣ || 28 ||

ನೈಗಮಗಾನವಿನೋದ ರಕ್ಷಿತ ಸುಪ್ರಹ್ಲಾದ ನಾರಾಯಣ || 29 ||
ಭಾರತ ಯತವರಶಂಕರ ನಾಮಾಮೃತಮಖಿಲಾಂತರ ನಾರಾಯಣ || 30 ||
***

ನಾರಾಯಣ ಸ್ತೋತ್ರ

ಪ್ರಸ್ತಾವನೆ:

ಆದಿ ಶಂಕರಾಚಾರ್ಯರು ರಚಿಸಿರುವ ನಾರಾಯಣ ಸ್ತುತಿಗಳಲ್ಲಿ ಈ ಸ್ತೋತ್ರವು ಅತ್ಯಂತ ಮಧುರ ಹಾಗೂ ಸುಲಲಿತವಾದದ್ದು. ಈ ಸ್ತೋತ್ರವನ್ನು ಮೊದಲು ಅದರ ಅಮ್ತರಾರ್ಥವನ್ನು ಅರಿತು  ಪ್ರತಿದಿನವೂ ಮುಂಜಾನೆ ಪಠಿಸಿದಲ್ಲಿ ಮನಸ್ಸಿಗೆ ಶಾಂತಿ, ಉಂಟಾಗಿ ಎಲ್ಲ ದುಷ್ಟ ಶಕ್ತಿಗಳು ದುಉರಾಗುವುದು ಹಾಗೂ ಆರೋಗ್ಯ ಮತ್ತು ಅಭ್ಯುದಯವು ದೊರಕುವುದು. 

ಶ್ಲೋಕ - 1 -  ಸಂಸ್ಕೃತದಲ್ಲಿ :

ನಾರಾಯಣ ನಾರಾಯಣ ಜಯ ಗೋವಿಂದ ಹರೇ
ನಾರಾಯಣ ನಾರಾಯಣ ಜಯ ಗೋಪಾಲ ಹರೇ 
ಕನ್ನಡದಲ್ಲಿ :

ನಾರಾಯಣ ನಾರಾಯಣ ಜಯ ಗೋವಿಂದ ಹರಿ
ನಾರಾಯಣ ನಾರಾಯಣ ಜಯ ಗೋಪಾಲ ಹರಿ

ವಿವರಣೆ :

ಎಲ್ಲರನ್ನೂ ರಕ್ಷಿಸುವ ಹೇ ದೇವಾ ! ಗೋವಿಂದ ! ನಾರಾಯಣ ! ಜಯವಾಗಲಿ
ಹೇ ಗೋಪಾಲ ! ಎಲ್ಲರನ್ನೂ ರಕ್ಷಿಸುವವ, ನಾರಾಯಣ ! ಜಯವಾಗಲಿ

ಶ್ಲೋಕ - 2 -  ಸಂಸ್ಕೃತದಲ್ಲಿ :

ಕರುಣಾಪಾರಾವಾರ ವರುಣಾಲಯಗಂಭೀರ ನಾರಾಯಣ
ಘನನೀರದಸಂಕಾಶ ಕೃತಕಲಿಕಲ್ಮಷನಾಶನ ನಾರಾಯಣ
ಕನ್ನಡದಲ್ಲಿ :

ಕರುಣೆಯ ಕಡಲು ಸಾಗರದೊಲು ಗಂಭೀರ ನಾರಾಯಣ
ಘನನೀರದ ಶ್ಯಾಮನೆ ಕಲಿಕಲುಷ ವಿನಾಶನ ನಾರಾಯಣ

ವಿವರಣೆ :

ಹೇ ದಯಾಸಾಗರನೇ ಎಲ್ಲ ದೇವರುಗಳಲ್ಲಿ ಸಾಗರದಂತೆ ಭವ್ಯವಾದ ನಾರಾಯಣನೇ ! ದಟ್ಟವಾದ ಮೋಡಗಳಂತೆ ಕಂಗೊಳಿಸುವ ಹೇ ದೇವನೆ ! ಕಲಿಯುಗದ ಹಾನಿಕಾರಕ ಹಾಗೂ ನೀಚತನವನ್ನು ನಾಶಮಾಡುವ ಹೇ ದೇವನೆ !

ಶ್ಲೋಕ - 3 -  ಸಂಸ್ಕೃತದಲ್ಲಿ :

ಯಮುನಾತೀರವಿಹಾರ ಧೃತಕೌಸ್ತುಭಮಣಿಹಾರ ನಾರಾಯಣ
ಪೀತಾಂಬರಪರಿಧಾನ ಸುರಕಲ್ಯಾಣನಿಧಾನ ನಾರಾಯಣ
ಕನ್ನಡದಲ್ಲಿ :

ಯಮುನಾತೀರ ವಿಹಾರಿ ಕೌಸ್ತುಭಮಣಿಶೋಭಿತ ನಾರಾಯಣ
ಪೀತಾಂಬರಧಾರಿ ಸುರಕಲ್ಯಾಣನಿಧಿಯೆ ನಾರಾಯಣ

ವಿವರಣೆ :

ಯಮುನಾ ನದಿಯ ದಡದಲ್ಲಿ ಗೋಪಾಲಕರೊಂದಿಗೆ ಆಟ ಪಾಟಗಳೊಂದಿಗೆ ನಲಿದಾಡಿದ ಹಾಗೂ ಸಾಗರ ಮಥನದಲ್ಲಿ ಉದ್ಭವಿಸಿದ ಹದಿನಾಲ್ಕು ರತ್ನಗಳಲ್ಲಿ ನಾಲ್ಕನೇ ರತ್ನವಾದ ಕೌಸ್ತುಭಮಣಿಯಿಂದ ಕೂಡಿದ ಮಾಲೆಯನ್ನು ಧರಿಸಿರುವ ಓ ! ನಾರಾಯಣನೇ !
ದೈವತ್ವವನ್ನು ಪ್ರತಿನಿಧಿಸುವ ಹಳದಿ ಬಣ್ಣದ ರೇಷ್ಮೆ ವಸ್ತ್ರವನ್ನು ಧರಿಸಿ ಎಲ್ಲ ದೇವಾನು ದೇವತೆಗಳಿಗೆ ಸದಾಚಾರಗಳ ಭಂಡಾರನಾದ ಓ ! ನಾರಾಯಣನೇ !

ಶ್ಲೋಕ - 4 -  ಸಂಸ್ಕೃತದಲ್ಲಿ :

ಮಂಜುಲಗುಂಜಾಭೂಷ ಮಾಯಾಮಾನುಷವೇಷ ನಾರಾಯಣ
ರಾಧಾಧರಮಧುರಸಿಕ ರಜನೀಕರಕುಲತಿಲಕ ನಾರಾಯಣ
ಕನ್ನಡದಲ್ಲಿ :

ಮಂಜುಳ ಗುಂಜೀಹಾರ ವಿಭೂಷಿತ ಮಾಯಾ ಮಾನುಷವೇಷ ನಾರಾಯಣ
ರಾಧೆಯಧರ ಮಧುರಾಮೃತರಸಿಕ ಯದುವರ ನಾರಾಯಣ

ವಿವರಣೆ :

ಮಹಾಲಕ್ಷ್ಮಿಯನ್ನು ಸಂಕೇತಿಸುವ ರಕ್ತವರ್ಣದ ಗುಂಜ ಮಣಿಗಳಿಂದ ಕೂಡಿದ ಮುದ್ದಾದ ಹಾರವನ್ನು ಧರಿಸಿರುವ ಹಾಗೂ ಬೇಕೆಂದಾಗ ಅದೃಷ್ಯ ಮಾನವನ ರೂಪವನ್ನು ಧರಿಸುವ ಹೇ ದೇವ ದೇವನೇ ! ಓ ! ನಾರಾಯಣ !
ಬೃಂದಾವನದಲ್ಲಿನ ರಾಧೆಯ ತುಟಿಗಳಿಂದ ಹೊರಸೂಸುವ ಜೇನನ್ನು ಸವಿದು ಆನಂದಿಸಿದ ಹಾಗೂ ಚಂದ್ರವಂಶದ ರಾಜಕುವರನೇ ! ಓ ! ನಾರಾಯಣನೇ !

ಶ್ಲೋಕ - 5 -  ಸಂಸ್ಕೃತದಲ್ಲಿ :

ಮುರಲೀಗಾನವಿನೋದ ವೇದಸ್ತುತಭೂಪಾದ ನಾರಾಯಣ
ಬರ್ಹಿನಿಬರ್ಹಾಪೀಡ ನಟನಾಟಕಫಣಿಕ್ರೀಡ ನಾರಾಯಣ
ಕನ್ನಡದಲ್ಲಿ :

ವೇಣುಗಾನ ವಿನೋದಿ ವೇದನುತಪಾದ ನಾರಾಯಣ
ನವಿಲಗರಿ ಧರಿಸಿದ ಘನಫಣಿಶಿರ ನರ್ತಕ ನಾರಾಯಣ

ವಿವರಣೆ :

ಕೊಳಲಿನಿಂದ ಸುಶ್ರಾವ್ಯವಾದ ಗಾಯನವನ್ನು ಹೊರಡಿಸಿ ಅದರಿಂದ ಆನಂದತುಂದಿಲನಾದ ಹೇ ದೇವನೇ ! ನಿನ್ನ ಪವಿತ್ರ ಪಾದ ಪದ್ಮಗಳನ್ನು ವೇದಗಳೇ ವೈಭವಯುತವಾಗಿ ಹೊಗಳಿ ಸ್ತುತಿಸಿರುವುದು ಓ ನಾರಾಯಣನೇ ! ವರ್ಣ ವೈವಿಧ್ಯಮಯ ನೀಲಿ ಬಣ್ಣದ ಸುಂದರ ನವಿಲಿಗರಿಯನ್ನು ಧರಿಸಿರುವ ಹೇ ದೇವನೇ ! ವಿಷಪೂರಿತ ಕಾಳಿಂಗ ಸರ್ಪದ ಹೆಡೆಯ ಮೇಲೇರಿ ನರ್ತಿಸಿದ ಹೇ ದೇವನೇ ! ನಾರಾಯಣನೇ !

ಶ್ಲೋಕ - 6 -  ಸಂಸ್ಕೃತದಲ್ಲಿ :

ವಾರಿಜಭೂಷಾಭರಣ ರಾಜೀವರುಕ್ಮಿಣೀರಮಣ ನಾರಾಯಣ
ಜಲರುಹದಲನಿಭನೇತ್ರ ಜಗದಾರಂಭಕಸೂತ್ರ ನಾರಾಯಣ
ಕನ್ನಡದಲ್ಲಿ :

ಜಲಜಾಭರಣ ಭೂಷಿತ ಜಲಧಿಸುತೆಯ ರಮಣ ನಾರಾಯಣ
ಜಲರುಹದಳದೊಲು ನಯನ ಜಗದುಗಮ ಸೂತ್ರ ನಾರಾಯಣ

ವಿವರಣೆ :

ಕಮಲ ಪುಷ್ಪವನ್ನೆ ಆಭರಣವನ್ನಾಗಿ ಧರಿಸಿರುವ ಹಾಗೂ ಪದ್ಮ ಪುತ್ರಿ ರುಕ್ಮಿಣಿಯ ರಮಣನೇ  ಓ, ದೇವ ! ನಾರಾಯಣನೇ ! ಪದ್ಮಪುಷ್ಪದಂಥಹ ನೇತ್ರವುಳ್ಳವನೇ ವಿಶ್ವ ಸೃಷ್ಟಿಗೇ ಕಾರಣನೇ ಓ ದೇವ ! ನಾರಾಯಣನೇ !

ಶ್ಲೋಕ - 7 -  ಸಂಸ್ಕೃತದಲ್ಲಿ :

ಪಾತಕರಜನೀಸಂಹರ ಕರುಣಾಲಯ ಮಾಮುದ್ಧರ ನಾರಾಯಣ
ಅಘ ಬಕಹಯಕಂಸಾರೇ ಕೇಶವ ಕೃಷ್ಣ ಮುರಾರೇ ನಾರಾಯಣ
ಕನ್ನಡದಲ್ಲಿ :

ಪಾತಕರಜ ಸಂಹಾರಕ ಕರುಣಾಲಯ ಉದ್ಧರಿಸೆನ್ನನು ನಾರಾಯಣ
ಅಘ ಬಕಹಯ ಕಂಸಾರಿಯೆ ಕೇಶವ ಕೃಷ್ಣಮುರಾರಿ ನಾರಾಯಣ

ವಿವರಣೆ :

ದುಷ್ಕರ್ಮಗಳ ಕತ್ತಲಿನ ಕೂಪವನ್ನು ನಾಶಮಾಡುವ ಓ ದೇವನೇ ! ನಿನ್ನ ಕರುಣೆಯಿಂದ ನನ್ನನ್ನು ಉದ್ಧರಿಸುವ ನಾರಾಯಣನೇ ! ನಿನ್ನ ಸೋದರಮಾವನಾದ ಕಂಸನು ಕಳುಹಿಸಿದ  ಅಘಾಸುರ ಹಾಗೂ ಭಗಾಸುರರನ್ನು ಸಂಹರಿಸಿದವನೇ ಹಾಗೂ ಕಂಸನ ಪರಮ ವೈರಿಯೇ ಮುರಾಸುರನ ವೈರಿಯೇ ಓ ಕೇಶವಾ ಕೃಷ್ಣಾ ನಾರಾಯಣನೇ !

ಶ್ಲೋಕ - 8 -  ಸಂಸ್ಕೃತದಲ್ಲಿ :

ಹಾಟಕನಿಭಪೀತಾಂಬರ ಅಭಯಂ ಕುರು ಮೇ ಮಾವರ ನಾರಾಯಣ
ದಶರಥರಾಜಕುಮಾರ ದಾನವಮದಸಂಹಾರ ನಾರಾಯಣ
ಕನ್ನಡದಲ್ಲಿ :

ಮಿಸುನಿಯೊಲಿಹ ಪೀತಾಂಬರಧರ ಅಭಯ ಕೊಡೆನಗೆ ಮಾರಮಣ ನಾರಾಯಣ
ದಶರಥ ರಾಜಕುಮಾರ ರಕ್ಕಸಮದಸಂಹಾರ ನಾರಾಯಣ

ವಿವರಣೆ :

ಬಂಗಾರದಂತೆ ಝಗ ಝಗಿಸುವ ಹಳದಿ ಬಣ್ಣದ ಪೀತಾಂಬರವನ್ನು ಧರಿಸಿರುವ ಓ ದೇವನೇ ! ಲಕ್ಷ್ಮೀರಮಣ ನಾರಾಯಣನೇ ಕೃಪೆದೋರಿ ನನ್ನನ್ನು ರಕ್ಷಿಸು. ಓ ದೇವನೇ ದಶರಥ ರಾಜಕುಮಾರನೇ ಅಸುರರ ದರ್ಪವನ್ನು ನಾಶಮಾಡಿದವನೇ ಹೇ ನಾರಾಯಣನೇ !

ಶ್ಲೋಕ - 9 -  ಸಂಸ್ಕೃತದಲ್ಲಿ :

ಗೋವರ್ಧನಗಿರಿ ರಮಣ ಗೋಪೀಮಾನಸಹರಣ ನಾರಾಯಣ
ಸರಯೂತೀರವಿಹಾರ ಸಜ್ಜನ ಋಷಿಮಂದಾರ ನಾರಾಯಣ
ಕನ್ನಡದಲ್ಲಿ :

ಗೋವರ್ಧನಗಿರಿ ಪ್ರಿಯಕರ ಗೋಪೀಮಾನಸ ಚೋರ ನಾರಾಯಣ
ಸರಯೂ ತೀರ ವಿಹಾರ ಸುಜನರ ಸುರತರು ನಾರಾಯಣ

ವಿವರಣೆ :

ಗೋವರ್ಧನ ಪರ್ವತವನ್ನು ಉದ್ಧರಿಸಿದ ಓ ದೇವನೇ ! ಗೋಪಿಕಾ ಸ್ತ್ರೀಯರ ಚಿತ್ತ ಚೋರನೇ ಹೇ ನಾರಾಯಣನೇ ! ಓ ದೇವನೇ!  ಸರಯೂ ನದಿ ತೀರದಲ್ಲಿ ಆಡಿ ಬೆಳೆದವನೇ ಸಜ್ಜನರ ಆಸೆಗಳನ್ನು ಪೂರೈಸುವ ವೃಕ್ಷದಂತಿರುವ ಓ ದೇವನೇ ನಾರಾಯಣನೇ !

ಶ್ಲೋಕ - 10 - ಸಂಸ್ಕೃತದಲ್ಲಿ :

ವಿಶ್ವಾಮಿತ್ರಮಖತ್ರ ವಿವಿಧಪರಾಸುಚರಿತ್ರ ನಾರಾಯಣ
ಧ್ವಜವಜ್ರಾoಕುಶಪಾದ ಧರಣೀಸುತಸಹಮೋದ ನಾರಾಯಣ
ಕನ್ನಡದಲ್ಲಿ :

ಯತಿವಿಶ್ವಾಮಿತ್ರ ಯಜ್ಞ ಸುರಕ್ಷಕ ವಿವಿಧ ಸುಚರಿತ್ರ ನಾರಾಯಣ
ಧ್ವಜ ವಜ್ರಾಂಕುಶಪಾದ ಧರಣಿಸುತೆಯೊಡನೆ ಮೋದ ನಾರಾಯಣ

ವಿವರಣೆ :

ವಿಶ್ವಾಮಿತ್ರರ ಯಾಗವನ್ನು ರಕ್ಷಿಸಿ ಪರಿಪೂರ್ಣಗೊಳಿಸಿದ ಅನೇಕ ಉತ್ತಮ ಚರಿತ್ರೆಯುಳ್ಳ ನಾರಾಯಣನೇ !  ಪಾದಗಳಲ್ಲಿ ಧ್ವಜ ಹಾಗೂ ಧ್ವಜ ಸ್ತಂಭದ ಚಿನ್ಹೆಯುಳ್ಳ ಹೇ ದೇವನೇ ! ಭೂದೇವಿಯ ಮಗಳಿಂದ ಆನಂದವನ್ನು ಪಡೆದ ಹೇ ದೇವನೇ ನಾರಾಯಣನೇ!

ಶ್ಲೋಕ - 11-  ಸಂಸ್ಕೃತದಲ್ಲಿ :

ಜನಕಸುತಾಪ್ರತಿಪಾಲ ಜಯ ಜಯ ಸಂಸ್ಕೃತಿಲೀಲ ನಾರಾಯಣ
ದಶರಥವಾಗ್ಧೃತಿಭಾರ ದಂಡಕವನಸಂಚಾರ ನಾರಾಯಣ
ಕನ್ನಡದಲ್ಲಿ :

ಜನಕಸುತಾಲೋಲ ಜಯ ಜಯ ಸಂಸಾರಲೀಲ ನಾರಾಯಣ
ಜನಕವಚನಪಾಲಕ ವನದಂಡಕಸಂಚಾರಿ ನಾರಾಯಣ

ವಿವರಣೆ :

ಜನಕರಾಜನ ಪುತ್ರಿಗಾಗಿ ಕಾದುಕೊಂಡಿದ್ದ ಓ ದೇವನೇ ! ಜೀವನ ನಾಟಕದ ಆಟಗಳನ್ನು ನೋಡಿ ಆನಂದಿಸಿದ ದೇವನಿಗೆ ಜಯವಾಗಲಿ ಜಯವಾಗಲಿ ನಾರಾಯಣನೇ ! ದಶರಥ ರಾಜನ ಮಾತನ್ನು ಪಾಲಿಸಿದ ಓ ದೇವನೇ ! ದಟ್ಟವಾದ ದಂಡಕವನವನ್ನೆಲ್ಲ ಬರೀ ಕಾಲ್ನಡಿಗೆಯಲ್ಲಿ ಸಂಚರಿಸಿದ ಓ ದೇವನೇ ನಾರಾಯಣನೇ !

ಶ್ಲೋಕ - 12 -  ಸಂಸ್ಕೃತದಲ್ಲಿ :

ಮುಷ್ಟಿಕಚಾಣೂರಸಂಹಾರ ಮುನಿಮಾನಸವಿಹಾರ ನಾರಾಯಣ
ವಾಲಿವಿನಿಗ್ರಹಶೌರ್ಯ ವರಸುಗ್ರೀವಹಿತಾರ್ಯ ನಾರಾಯಣ
ಕನ್ನಡದಲ್ಲಿ :

ಮುಷ್ಟಿಕಚಾಣೂರರ ಮಣಿಸಿದ ಮುನಿಮನ ವಾಸಿ ನಾರಾಯಣ
ದುಷ್ಟ ವಾಲಿಯ ನಿಗ್ರಹಿಸಿ ವರ ಸುಗ್ರೀವಗನುಗ್ರಹಿಸಿದ ನಾರಾಯಣ

ವಿವರಣೆ :

ಕಂಸನ ಆಸ್ಥಾನದಲ್ಲಿ ಮುಷ್ಟಿಯುದ್ಧದಲ್ಲಿ ದುಷ್ಟ ಮುಷ್ಟಿಕ ಹಾಗೂ ಚಾಣೂರರನ್ನು ಸಂಹಾರ ಮಾಡಿದ ಓ ದೇವನೇ ! ಋಷಿ ಮುನಿಗಳ ಮನಸ್ಸಿನಲ್ಲಿ ನೆಲೆಸಿರುವ ಓ ದೇವನೇ ! ನಾರಾಯಣನೇ ! ಪರಾಕ್ರಮಿ ವಾಲಿಯನ್ನು ಸಂಹಾರ ಮಾಡಿ ಸುಗ್ರೀವನಿಗೆ ಸಹಾಯ ಮಾಡಿದ  ಓ ದೇವನೇ ! ನಾರಾಯಣನೇ !

ಶ್ಲೋಕ - 13 -  ಸಂಸ್ಕೃತದಲ್ಲಿ :

ಮಾಂ ಮುರಲೀಕರ ಧೀವರಪಾಲಯ ಪಾಲಯ ಶ್ರೀಧರ ನಾರಾಯಣ
ಜಲನಿಧಿ ಬಂಧನ ಧೀರ ರಾವಣಕಂಠವಿದಾರ ನಾರಾಯಣ
ಕನ್ನಡದಲ್ಲಿ :

ಕೊಳಲನು ಮಾಡೆನ್ನನು ಪಾಲಿಸು ಪಾಲಿಸು ಶ್ರೀಧರ ನಾರಾಯಣ
ಜಲಧಿನಿಬಂಧನ ಧೀರನೆ ದಶಶಿರಕಂಠವ ಸೀಳಿದ ನಾರಾಯಣ

ವಿವರಣೆ :

ಕೊಳಲನ್ನು ಕೈಯಲ್ಲಿ ಹಿಡಿದಿರುವ ಓ ಶೌರಿಯೇ ಲಕ್ಷ್ಮೀರಮಣನೇ ಸಹಾಯ ಮಾಡು ಸಹಾಯ ಮಾಡು ನಾರಾಯಣನೇ. ಸಾಗರದ ಮೇಲೆ ಸೇತುವೆ ನಿರ್ಮಿಸಿದ ಓ ದೇವನೇ ! ರಾವಣನ ದಶ ಶಿರಗಳನ್ನು ತರಿದ ನಾರಾಯಣನೇ !

ಶ್ಲೋಕ - 14 -  ಸಂಸ್ಕೃತದಲ್ಲಿ :

ತಾಟಕಮರ್ದನ ರಾಮ ನಟಗುಣವಿವಿಧ ಸುರಾಮ ನಾರಾಯಣ
ಗೌತಮಪತ್ನೀಪೂಜನ ಕರುಣಾಘನಾವಲೋಕನ ನಾರಾಯಣ
ಕನ್ನಡದಲ್ಲಿ :

ತಾಟಕಿಮರ್ದನ ರಾಮ ಸುರನಾಟ್ಯಗಾನಾರಾಮ ನಾರಾಯಣ
ಗೌತಮಸತಿ ಪೂಜಿತ ಕರುಣಾರಸ ಸೇಚನ ನಾರಾಯಣ

ವಿವರಣೆ :

ತಾಟಕಿಯ ಅಹಂಕಾರವನ್ನು ಸಂಹರಿಸಿದ ಓ ದೇವನೇ ! ದೇವಾನು ದೇವತೆಗಳು ಗಾನ ನಾಟ್ಯಗಳಿಂದ ವರ್ಣಿಸಲ್ಪಡುವ ಓ ದೇವನೇ ನಾರಾಯಣನೇ ! ಗೌತಮ ಪತ್ನಿ ಅಹಲ್ಯೆಯಿಂದ ಪೂಜಿಸಲ್ಪಟ್ಟ ಹೇ ದೇವನೇ ಕರುಣಾಪೂರಿತ ದೃಷ್ಟಿಯುಳ್ಳವನೇ ನಾರಾಯಣನೇ !

ಶ್ಲೋಕ - 15 -  ಸಂಸ್ಕೃತದಲ್ಲಿ

ಸಂಭ್ರಮಸೀತಾಹಾರ ಸಾತಕೇತಪುರವಿಹಾರ ನಾರಾಯಣ
ಅಚಲೋಧೃತಚಂಚತ್ಕರ ಭಕ್ತಾನುಗ್ರಹತತ್ಪರ ನಾರಾಯಣ
ಕನ್ನಡದಲ್ಲಿ :

ಜಾನಕೀಮನ ಚೋರ ಸಾಕೇತಪುರ ವಿಹಾರ ನಾರಾಯಣ
ಗೋವರ್ಧನಗಿರಿಧರ ಧೀರ ಭಕ್ತಾನುಗ್ರಹತತ್ಪರ ನಾರಾಯಣ

ವಿವರಣೆ :

ಜನಕರಾಜನ ಪ್ರೀತಿಯ ಪುತ್ರಿಯ ಮನವನ್ನು ಕದ್ದ ಓ ದೇವನೇ ! ಅಯೋಧ್ಯಾ ನಿವಾಸಿಯೇ ನಾರಾಯಣನೇ, ಪರ್ವತವನ್ನೇ ಮೇಲೆತ್ತಲು ಶಕ್ಯನಾದ ಓ ದೇವನೇ ! ಸದಾ ಭಕ್ತರನ್ನು ಆಶೀರ್ವದಿಸಲು ಉತ್ಸುಕನಾಗಿರುವ ಓ ದೇವನೇ ! ನಾರಾಯಣನೇ !

ಶ್ಲೋಕ - 16 -  ಸಂಸ್ಕೃತದಲ್ಲಿ :

ನೈಗಮಗಾನವಿನೋದ ರಕ್ಷಿತ ಸುಪ್ರಹ್ಲಾದ ನಾರಾಯಣ
ಭಾರತ ಯತಿವರಶಂಕರ ನಾಮಾಮೃತಮಖಿಲಾಂತರ ನಾರಾಯಣ
ಕನ್ನಡದಲ್ಲಿ :

ಸಾಮಗಾನವಿನೋದ ರಾಕ್ಷಸಸುತ ಪ್ರಹ್ಲಾದವರದ ನಾರಾಯಣ
ವರಶಂಕರರುಲಿದ ಹರಿನಾಮಸುಧಾಸಾರ ಜಗಸಕಲಕಾಧಾರ ನಾರಾಯಣ

ವಿವರಣೆ :

ಸಾಮಗಾನ ಪ್ರಿಯನಾದ ಓ ದೇವನೇ ! ಹಿರಣ್ಯ ಕಶಿಪುವಿನ ಪುತ್ರನಾದ ಪ್ರಹ್ಲಾದನನ್ನು ರಾಕ್ಷಸರಿಂದ ರಕ್ಷಿಸಿದವನೇ ಓ ನಾರಾಯಣನೇ ! ಆದಿ ಶಂಕರರು ರಚಿಸಿದ ಈ ಹರಿಯ ನಾಮದ ಅಮೃತ ಸಾರವು ಜಗತ್ತಿನ ಸಮಸ್ತರಿಗೂ ಶುಭವನ್ನುಂಟುಮಾಡಲಿ.

ಶ್ಲೋಕ - 17 -  ಸಂಸ್ಕೃತದಲ್ಲಿ :

ನಾರಾಯಣ ನಾರಾಯಣ ಜಯ ಗೋವಿಂದ ಹರೇ
ನಾರಾಯಣ ನಾರಾಯಣ ಜಯ ಗೋಪಾಲ ಹರೇ    
ಕನ್ನಡದಲ್ಲಿ :

ನಾರಾಯಣ ನಾರಾಯಣ ಜಯ ಗೋವಿಂದ ಹರೇ
ನಾರಾಯಣ ನಾರಾಯಣ ಜಯ ಗೋಪಾಲ ಹರೇ 

ವಿವರಣೆ :

ಎಲ್ಲರನ್ನೂ ರಕ್ಷಿಸುವ ಹೇ ದೇವಾ ! ಗೋವಿಂದ ! ನಾರಾಯಣ ! ಜಯವಾಗಲಿ
ಹೇ ಗೋಪಾಲ ! ಎಲ್ಲರನ್ನೂ ರಕ್ಷಿಸುವವ, ನಾರಾಯಣ ! ಜಯವಾಗಲಿ !
***

नारायण स्तोत्रम् 

श्री गणेशाय नमः ।
नारायण नारायण जय गोविन्द हरे ॥

नारायण नारायण जय गोपाल हरे ॥ ध्रु ॥

करुणापारावार वरुणालयगम्भीर ॥ नारायण ॥ १॥

घननीरदसङ्काश कृतकलिकल्मषनाश ॥ नारायण ॥ २॥

यमुनातीरविहार धृतकौस्तुभमणिहार ॥ नारायण ॥ ३॥

पीताम्बरपरिधान सुरकल्याणनिधान ॥ नारायण ॥ ४॥

मञ्जुलगुञ्जाभूष मायामानुषवेष ॥ नारायण ॥ ५॥

राधाधरमधुरसिक रजनीकरकुलतिलक ॥ नारायण ॥ ६॥

मुरलीगानविनोद वेदस्तुतभूपाद ॥ नारायण ॥ ७॥

बर्हिनिबर्हापीड नटनाटकफणिक्रीड ॥ नारायण ॥ ८॥

वारिजभूषाभरण राजिवरुक्मिणीरमण ॥ नारायण ॥ ९॥

जलरुहदलनिभनेत्र जगदारम्भकसूत्र ॥ नारायण ॥ १०॥

पातकरजनीसंहार करुणालय मामुद्धर ॥ नारायण ॥ ११॥

अघबकक्षयकंसारे केशव कृष्ण मुरारे ॥ नारायण ॥ १२॥

हाटकनिभपीताम्बर अभयं कुरु मे मावर ॥ नारायण ॥ १३॥

दशरथराजकुमार दानवमदसंहार ॥ नारायण ॥ १४॥

गोवर्धनगिरिरमण गोपीमानसहरण ॥ नारायण ॥ १५॥

शरयूतीरविहार सज्जनऋषिमन्दार ॥ नारायण ॥ १६॥

विश्वामित्रमखत्र विविधपरासुचरित्र ॥ नारायण ॥ १७॥

ध्वजवज्राङ्कुशपाद धरणीसुतसहमोद ॥ नारायण ॥ १८॥

जनकसुताप्रतिपाल जय जय संस्मृतिलील ॥ नारायण ॥ १९॥

दशरथवाग्धृतिभार दण्डकवनसञ्चार ॥ नारायण ॥ २०॥

मुष्टिकचाणूरसंहार मुनिमानसविहार ॥ नारायण ॥ २१॥

वालिविनिग्रहशौर्य वरसुग्रीवहितार्य ॥ नारायण ॥ २२॥ वालीनिग्रह

मां मुरलीकर धीवर पालय पालय श्रीधर ॥ नारायण ॥ २३॥

जलनिधिबन्धनधीर रावणकण्ठविदार ॥ नारायण ॥ २४॥

ताटीमददलनाढ्य नटगुणविविधधनाढ्य ॥ नारायण ॥ २५॥

गौतमपत्नीपूजन करुणाघनावलोकन ॥ नारायण ॥ २६॥

सम्भ्रमसीताहार साकेतपुरविहार ॥ नारायण ॥ २७॥

अचलोद्धृतिचञ्चत्कर भक्तानुग्रहतत्पर ॥ नारायण ॥ २८॥

नैगमगानविनोद रक्षःसुतप्रह्लाद ॥ नारायण ॥ २९॥ रक्षित सुप्रह्लाद

भारतीयतिवरशङ्कर नामामृतमखिलान्तर ॥ नारायण ॥ ३०॥

। इति श्रीमच्छङ्कराचार्यविरचितं नारायणस्तोत्रं सम्पूर्णम् ।
****
ನಾರಾಯಣಸ್ತೋತ್ರಮ್ 

ಶ್ರೀ ಗಣೇಶಾಯ ನಮಃ ।
ನಾರಾಯಣ ನಾರಾಯಣ ಜಯ ಗೋವಿನ್ದ ಹರೇ ॥
ನಾರಾಯಣ ನಾರಾಯಣ ಜಯ ಗೋಪಾಲ ಹರೇ ॥ ಧ್ರು ॥

ಕರುಣಾಪಾರಾವಾರ ವರುಣಾಲಯಗಮ್ಭೀರ ॥ 
ನಾರಾಯಣ ॥ 1॥

ಘನನೀರದಸಂಕಾಶ ಕೃತಕಲಿಕಲ್ಮಷನಾಶ ॥ 
ನಾರಾಯಣ ॥ 2॥

ಯಮುನಾತೀರವಿಹಾರ ಧೃತಕೌಸ್ತುಭಮಣಿಹಾರ ॥ 
ನಾರಾಯಣ ॥ 3॥

ಪೀತಾಮ್ಬರಪರಿಧಾನ ಸುರಕಲ್ಯಾಣನಿಧಾನ ॥ 
ನಾರಾಯಣ ॥ 4॥

ಮಂಜುಲಗುಂಜಾಭೂಷ ಮಾಯಾಮಾನುಷವೇಷ ॥ 
ನಾರಾಯಣ ॥ 5॥

ರಾಧಾಧರಮಧುರಸಿಕ ರಜನೀಕರಕುಲತಿಲಕ ॥ 
ನಾರಾಯಣ ॥ 6॥

ಮುರಲೀಗಾನವಿನೋದ ವೇದಸ್ತುತಭೂಪಾದ ॥ 
ನಾರಾಯಣ ॥ 7॥

ಬರ್ಹಿನಿಬರ್ಹಾಪೀಡ ನಟನಾಟಕಫಣಿಕ್ರೀಡ ॥ 
ನಾರಾಯಣ ॥ 8॥

ವಾರಿಜಭೂಷಾಭರಣ ರಾಜಿವರುಕ್ಮಿಣೀರಮಣ ॥ 
ನಾರಾಯಣ ॥ 9॥

ಜಲರುಹದಲನಿಭನೇತ್ರ ಜಗದಾರಮ್ಭಕಸೂತ್ರ ॥ 
ನಾರಾಯಣ ॥ 10॥

ಪಾತಕರಜನೀಸಂಹಾರ ಕರುಣಾಲಯ ಮಾಮುದ್ಧರ ॥ 
ನಾರಾಯಣ ॥ 11॥

ಅಘಬಕಕ್ಷಯಕಂಸಾರೇ ಕೇಶವ ಕೃಷ್ಣ ಮುರಾರೇ ॥ 
ನಾರಾಯಣ ॥ 12॥

ಹಾಟಕನಿಭಪೀತಾಮ್ಬರ ಅಭಯಂ ಕುರು ಮೇ ಮಾವರ ॥ 
ನಾರಾಯಣ ॥ 13॥

ದಶರಥರಾಜಕುಮಾರ ದಾನವಮದಸಂಹಾರ ॥ 
ನಾರಾಯಣ ॥ 14॥

ಗೋವರ್ಧನಗಿರಿರಮಣ ಗೋಪೀಮಾನಸಹರಣ ॥ 
ನಾರಾಯಣ ॥ 15॥

ಶರಯೂತೀರವಿಹಾರ ಸಜ್ಜನಋಷಿಮನ್ದಾರ ॥ 
ನಾರಾಯಣ ॥ 16॥

ವಿಶ್ವಾಮಿತ್ರಮಖತ್ರ ವಿವಿಧಪರಾಸುಚರಿತ್ರ ॥ 
ನಾರಾಯಣ ॥ 17॥

ಧ್ವಜವಜ್ರಾಂಕುಶಪಾದ ಧರಣೀಸುತಸಹಮೋದ ॥ 
ನಾರಾಯಣ ॥ 18॥

ಜನಕಸುತಾಪ್ರತಿಪಾಲ ಜಯ ಜಯ ಸಂಸ್ಮೃತಿಲೀಲ ॥ 
ನಾರಾಯಣ ॥ 19॥

ದಶರಥವಾಗ್ಧೃತಿಭಾರ ದಂಡಕವನಸಂಚಾರ ॥ 
ನಾರಾಯಣ ॥ 20॥

ಮುಷ್ಟಿಕಚಾಣೂರಸಂಹಾರ ಮುನಿಮಾನಸವಿಹಾರ ॥ 
ನಾರಾಯಣ ॥ 21॥

ವಾಲಿವಿನಿಗ್ರಹಶೌರ್ಯ ವರಸುಗ್ರೀವಹಿತಾರ್ಯ ॥ 
ನಾರಾಯಣ ॥ 22॥ ವಾಲೀನಿಗ್ರಹ

ಮಾಂ ಮುರಲೀಕರ ಧೀವರ ಪಾಲಯ ಪಾಲಯ ಶ್ರೀಧರ ॥ 
ನಾರಾಯಣ ॥ 23॥

ಜಲನಿಧಿಬನ್ಧನಧೀರ ರಾವಣಕಂಠವಿದಾರ ॥ 
ನಾರಾಯಣ ॥ 24॥

ತಾಟೀಮದದಲನಾಢ್ಯ ನಟಗುಣವಿವಿಧಧನಾಢ್ಯ ॥ 
ನಾರಾಯಣ ॥ 25॥

ಗೌತಮಪತ್ನೀಪೂಜನ ಕರುಣಾಘನಾವಲೋಕನ ॥ 
ನಾರಾಯಣ ॥ 26॥

ಸಮ್ಭ್ರಮಸೀತಾಹಾರ ಸಾಕೇತಪುರವಿಹಾರ ॥ 
ನಾರಾಯಣ ॥ 27॥

ಅಚಲೋದ್ಧೃತಿಚಂಚತ್ಕರ ಭಕ್ತಾನುಗ್ರಹತತ್ಪರ ॥ 
ನಾರಾಯಣ ॥ 28॥

ನೈಗಮಗಾನವಿನೋದ ರಕ್ಷಃಸುತಪ್ರಹ್ಲಾದ ॥ 
ನಾರಾಯಣ ॥ 29॥ ರಕ್ಷಿತ ಸುಪ್ರಹ್ಲಾದ

ಭಾರತೀಯತಿವರಶಂಕರ ನಾಮಾಮೃತಮಖಿಲಾನ್ತರ ॥ 
ನಾರಾಯಣ ॥ 30॥

। ಇತಿ ಶ್ರೀಮಚ್ಛಂಕರಾಚಾರ್ಯವಿರಚಿತಂ 
ನಾರಾಯಣಸ್ತೋತ್ರಂ ಸಮ್ಪೂರ್ಣಮ್ ।
***