Showing posts with label ಸೂರ್ಯ ಕವಚ ಸ್ತೋತ್ರಂ ಯಾಜ್ಞವಲ್ಕ್ಯ ವಿರಚಿತಮ್. Show all posts
Showing posts with label ಸೂರ್ಯ ಕವಚ ಸ್ತೋತ್ರಂ ಯಾಜ್ಞವಲ್ಕ್ಯ ವಿರಚಿತಮ್. Show all posts

Friday, 20 December 2019

ಸೂರ್ಯ ಕವಚ ಸ್ತೋತ್ರಂ ಯಾಜ್ಞವಲ್ಕ್ಯ ವಿರಚಿತಮ್ surya kavacha stotra by yajnavalkya

sUryakavachastotram 
॥ ಸೂರ್ಯಕವಚಸ್ತೋತ್ರಮ್ ॥

ಶ್ರೀಗಣೇಶಾಯ ನಮಃ ।
ಯಾಜ್ಞವಲ್ಕ್ಯ ಉವಾಚ ।
ಶೃಣುಷ್ವ ಮುನಿಶಾರ್ದೂಲ ಸೂರ್ಯಸ್ಯ ಕವಚಂ ಶುಭಮ್ ।
ಶರೀರಾರೋಗ್ಯದಂ ದಿವ್ಯಂ ಸರ್ವಸೌಭಾಗ್ಯದಾಯಕಮ್ ॥ 1॥

ದೇದೀಪ್ಯಮಾನಮುಕುಟಂ ಸ್ಫುರನ್ಮಕರಕುಂಡಲಮ್ ।
ಧ್ಯಾತ್ವಾ ಸಹಸ್ರಕಿರಣಂ ಸ್ತೋತ್ರಮೇತದುದೀರಯೇತ್ ॥ 2॥

ಶಿರೋ ಮೇ ಭಾಸ್ಕರಃ ಪಾತು ಲಲಾಟಂ ಮೇಽಮಿತದ್ಯುತಿಃ ।
ನೇತ್ರೇ ದಿನಮಣಿಃ ಪಾತು ಶ್ರವಣೇ ವಾಸರೇಶ್ವರಃ ॥ 3॥

ಘ್ರಾಣಂ ಘರ್ಮಘೃಣಿಃ ಪಾತು ವದನಂ ವೇದವಾಹನಃ ।
ಜಿಹ್ವಾಂ ಮೇ ಮಾನದಃ ಪಾತು ಕಂಠಂ ಮೇ ಸುರವನ್ದಿತಃ ॥ 4॥

ಸ್ಕನ್ಧೌ ಪ್ರಭಾಕರಃ ಪಾತು ವಕ್ಷಃ ಪಾತು ಜನಪ್ರಿಯಃ ।
ಪಾತು ಪಾದೌ ದ್ವಾದಶಾತ್ಮಾ ಸರ್ವಾಂಗಂ ಸಕಲೇಶ್ವರಃ ॥ 5॥

ಸೂರ್ಯರಕ್ಷಾತ್ಮಕಂ ಸ್ತೋತ್ರಂ ಲಿಖಿತ್ವಾ ಭೂರ್ಜಪತ್ರಕೇ ।
ದಧಾತಿ ಯಃ ಕರೇ ತಸ್ಯ ವಶಗಾಃ ಸರ್ವಸಿದ್ಧಯಃ ॥ 6॥

ಸುಸ್ನಾತೋ ಯೋ ಜಪೇತ್ಸಮ್ಯಗ್ಯೋಽಧೀತೇ ಸ್ವಸ್ಥಮಾನಸಃ ।
ಸ ರೋಗಮುಕ್ತೋ ದೀರ್ಘಾಯುಃ ಸುಖಂ ಪುಷ್ಟಿಂ ಚ ವಿನ್ದತಿ ॥ 7॥

॥ ಇತಿ ಶ್ರೀಮದ್ಯಾಜ್ಞವಲ್ಕ್ಯಮುನಿವಿರಚಿತಂ ಸೂರ್ಯಕವಚಸ್ತೋತ್ರಂ ಸಮ್ಪೂರ್ಣಮ್ ॥
*****

ಶ್ರೀ ಯಾಜ್ಞವಲ್ಕ್ಯ ಮುನಿ ವಿರಚಿತಮ್  ಶ್ರೀ ಸೂರ್ಯ ಕವಚ ||
 ಈ ಶ್ಲೋಕವನ್ನು ದಿನಾಗಲೂ ಪಾರಾಯಣ ಮಾಡಬೇಕು .
ದಿನಾ ಆಗದಿದ್ದರೇ   ಪ್ರತಿ  ಭಾನುವಾರ  Sunday   ಪಾರಾಯಣ ಮಾಡ ಬಹುದು.
 ಒಳ್ಳೆಯ ಆರೋಗ್ಯ ಭಾಗ್ಯ  ಶ್ರು ಸೂರ್ಯ ಅಂತರ್ಗತ  ನಾರಾಯಣ ಕೊಡುತ್ತಾನೆ 
***

 || ಶ್ರೀ ಗಣೇಶಾಯ ನಮ: ||


ಯಾಜ್ಞವಲ್ಕ್ಯ ಉವಾಚ:-

ಶೃಣುಷ್ವ ಮುನಿಶಾರ್ದೂಲ ಸೂರ್ಯಸ್ಯ ಕವಚಂ ಶುಭಮ್ |

ಶರೀರಾರೋಗ್ಯದಂ ದಿವ್ಯಂ ಸರ್ವ ಸೌಭಾಗ್ಯದಾಯಕಮ್ ||೧||


ಭಾವಾರ್ಥ:-

ಯಾಜ್ಞವಲ್ಕ್ಯರುಹೇಳಿದರು:-

ಎಲೈ ಮುನಿಪುಂಗವನೇ!ಮಂಗಲದಾಯಕವೂ ಶ್ರೇಷ್ಠವೂ, ಶರೀರಾರೋಗ್ಯವನ್ನು ರಕ್ಷಿಸುವಂತಹದೂ, ಸಮಸ್ತ ಸೌಭಾಗ್ಯವನ್ನು ಒದಗಿಸಿಕೊಡುವಂತಹದೂ ಆಗಿರುವ ಸೂರ್ಯಕವಚವನ್ನು ನಿನಗೆ ಅರುಹುವವನಾಗಿದ್ದೇನೆ.ಕೇಳುವವನಾಗು.


ದೇದೀಪ್ಯಮಾನ ಮುಕುಟಂ ಸ್ಫುರನ್ಮಕರ ಕುಂಡಲಮ್ |

ಧ್ಯಾತ್ವಾ ಸಹಸ್ರಕಿರಣಂ ಸ್ತೋತ್ರಮೇತುದುದೀರಯೇತ್ ||೨||


ಭಾವಾರ್ಥ:-ಅತ್ಯಂತ ಪ್ರಕಾಶಿಸುತ್ತಿರುವ ಕಿರೀಟವುಳ್ಳವನೂ, ರಂಜಿಸುತ್ತಿರುವ ಮೊಸಳೆಯಾಕಾರದ ಕಿವಿಯಾಭರಣಗಳನ್ನು ಧರಿಸಿದವನೂ, ಸಾವಿರಕಿರಣಗಳೂಳ್ಳವನೂ ಆಗಿರುವ ಸೂರ್ಯನನ್ನು ಧ್ಯಾನಿಸುತ್ತಾ ಈ ಸ್ತುತಿಯನ್ನು ಪಠಿಸಬೇಕು.


ಶಿರೋಮೇ ಭಾಸ್ಕರ: ಪಾತು ಲಲಾಟಂ ಮೇsಮಿತದ್ಯುತಿ: |

ನೇತ್ರೇ ದಿನಮಣಿ:ಪಾತು ಶ್ರವಣೇವಾಸರೇಶ್ವರ: ||೩||


ಭಾವಾರ್ಥ:-ನನ್ನ ತಲೆಯನ್ನು ಭಾಸ್ಕರನೂ,ಹಣೆಯನ್ನು ಮಿತಿಯಿಲ್ಲದಪ್ರಕಾಶವುಳ್ಳವನೂ ಕಾಪಾಡಲಿ.ದಿನಮಣಿಯು ನಯನಗಳನ್ನೂ,ದಿನಾಧಿಪತಿಯು ನನ್ನ ಕಿವಿಗಳನ್ನೂ ರಕ್ಷಿಸಲಿ.


ಘ್ರಾಣಂ ಫರ್ಮಘೃಣಿ:ಪಾತು ವದನಂ ವೇದವಾಹನ: |

ಜಿಹ್ವಾಂ ಮೇ ಮಾನವ:ಪಾತು ಕಂಠಂ ಮೇ ಸುರವಂದಿತ: ||೪||


ಭಾವಾರ್ಥ:-ನಾಸಿಕವನ್ನು ಉಷ್ಣ ಕಿರಣನೂ,ಮುಖವನ್ನು ವೇದವಾಹನನೂ ಕಾಪಾಡಲಿ.ಹಾಗೆಯೇ ನನ್ನ ನಾಲಿಗೆಯನ್ನು ಗೌರವವನ್ನೊದಗಿಸುವವನೂ,ಕುತ್ತಿಗೆಯನ್ನು ಸುರರಿಂದ ನಮಿಸಲ್ಪಡುವವನೂ ಕಾಪಾಡಲಿ.


ಸ್ಕಂಧೌ ಪ್ರಭಾಕರ: ಪಾತು ವಕ್ಷ: ಪಾತು ಜನಪ್ರಿಯ: |

ಪಾತು ಪಾದೌ ದ್ವಾದಶಾತ್ಮಾ ಸರ್ವಾಂಗಂ ಸಕಲೇಶ್ವರ: ||೫||


ಭಾವಾರ್ಥ:-ಪ್ರಭಾಕರನು ಹಗಲಿನಲ್ಲಿಯೂ, ಜನಪ್ರಿಯನು ಎದೆಯನ್ನೂ ಕಾಪಾಡಲಿ. ದ್ವಾದಶಾತ್ಮನು ಪಾದಗಳನ್ನೂ,ಸರ್ವಾಂಗಗಳನ್ನು ಸಕಲಾಧಿಪನೂ ಕಾಪಾಡಲಿ.


ಸೂರ್ಯ ರಕ್ಷಾತ್ಮಕಂ ಸ್ತೋತ್ರಂ ಲಿಖಿತ್ವಾ ಭೂರ್ಜಪತ್ರಕೆ |

ದಧಾತಿ ಯ:ಕರೇತಸ್ಯ ವಶಗಾ: ಸರ್ವಸಿದ್ಧಯ: ||೬||


ಭಾವಾರ್ಥ:-ಸೂರ್ಯನ ರಕ್ಷಣೆ ಪಡೆಯುವ ಈ ಸ್ತುತಿಯನ್ನು ಭುಜಪತ್ರಾವಳಿಯಲ್ಲಿ ಬರೆದು ಹಸ್ತದಲ್ಲಿ ಧರಿಸುಕೊಳ್ಳುವಾತನಿಗೆ ಸಮಸ್ತ ಇಷ್ಟಾರ್ಥಗಳು ಲಭಿಸುವವು.


ಸುಸ್ನಾತೋ ಯೋ ಜಪೇತ್ಸಮ್ಯಗ್ಯೋsಧೀತೇಸ್ವಸ್ಥಮಾನಸ: |

ಸ ರೋಗಮುಕ್ತೋ ಧೀರ್ಘಾಯು: ಸುಖಂ ಪುಷ್ಟಿಂ ಚ ವಿಂದತಿ ||೭||


ಭಾವಾರ್ಥ:-ಸ್ನಾನವನ್ನು ಮಾಡಿ ಶಾಂತ ಮನಸ್ಸಿನಿಂದ ಉತ್ತಮವಾಗಿ ಜಪಿಸುವಾತನು ರೋಗ ಮುಕ್ತನಾಗಿ ಆರೋಗ್ಯಶಾಲಿಯಾಗುವನು.ಧೀರ್ಘಾಯುಶಾಲಿಯಾಗುವನು. ಸೌಖ್ಯವನ್ನೂ ಶರೀರ ಸಾಮರ್ಥ್ಯವಂತನಾಗುವನು.

***

|| ಇತಿ ಸೂರ್ಯ ಕವಚ ಸ್ತೋತ್ರಮ್ ||  || ಈ ರೀತಿಯಾಗಿ ಸೂರ್ಯ ಕವಚ ಸ್ತೋತ್ರಗಳ ಭಾವಾರ್ಥವಾಗಿದೆ ||

***


॥ सूर्यकवचस्तोत्रम् २ ॥

श्रीगणेशाय नमः ।
याज्ञवल्क्य उवाच ।
श‍ृणुष्व मुनिशार्दूल सूर्यस्य कवचं शुभम् ।
शरीरारोग्यदं दिव्यं सर्वसौभाग्यदायकम् ॥ १॥

देदीप्यमानमुकुटं स्फुरन्मकरकुण्डलम् ।
ध्यात्वा सहस्रकिरणं स्तोत्रमेतदुदीरयेत् ॥ २॥

शिरो मे भास्करः पातु ललाटं मेऽमितद्युतिः ।
नेत्रे दिनमणिः पातु श्रवणे वासरेश्वरः ॥ ३॥

घ्राणं घर्मघृणिः पातु वदनं वेदवाहनः ।
जिह्वां मे मानदः पातु कण्ठं मे सुरवन्दितः ॥ ४॥

स्कन्धौ प्रभाकरः पातु वक्षः पातु जनप्रियः ।
पातु पादौ द्वादशात्मा सर्वाङ्गं सकलेश्वरः ॥ ५॥

सूर्यरक्षात्मकं स्तोत्रं लिखित्वा भूर्जपत्रके ।
दधाति यः करे तस्य वशगाः सर्वसिद्धयः ॥ ६॥

सुस्नातो यो जपेत्सम्यग्योऽधीते स्वस्थमानसः ।
स रोगमुक्तो दीर्घायुः सुखं पुष्टिं च विन्दति ॥ ७॥


॥ इति श्रीमद्याज्ञवल्क्यमुनिविरचितं सूर्यकवचस्तोत्रं सम्पूर्णम् ॥
************



ಸೂರ್ಯ ಕವಚ ಸ್ತೋತ್ರಂ surya kavacha stotra

ಯಾಜ್ಞವಲ್ಕ್ಯ  ಉವಾಚ ।


ಶೃಣುಷ್ವ  ಮುನಿಶಾರ್ದೂಲ , ಸೂರ್ಯಸ್ವ ಕವಚಂ  ಶುಭಂ ।

ಶರೀರರೋಗ್ಯದಂ  ದಿವ್ಯಂ ಸರ್ವಸೌಭಾಗ್ಯದಾಯಕಮ್  ।।೧।।

ದೇದೀಷ್ಯಮಾನಮುಕುಟಂ , ಸ್ಫುರನ್  ಮಕರ ಕುಂಡಲಂ ।

ಧ್ಯಾತ್ವಾ  ಸಹಸ್ರ ಕಿರಣಂ  ಸ್ತೋತ್ರಮೇತದುದೀರಯೇತ್ ।।೨।।

ಶಿರೋ ಮೇ  ಭಾಸ್ಕರಃ  ಪಾತು ,ಲಲಾಟಂ  ಮೇಮಿತದ್ಯುತಿಃ ।

ನೇತ್ರೆ  ದಿನಮಣಿಃ  ಪಾತು , ಶ್ರವಣೆ  ವಾಸರೇಶ್ವರಃ ।।೩।।

ಘ್ರಾಣಂ ಧರ್ಮಘ್ರುಣಿಃ  ಪಾತು ,ವದನಂ  ವೇದ ವಾಹನಃ ।

ಜಿಹ್ವಾಂ ಮೇ   ಮಾನದಃ  ಪಾತು , ಕಂಠಮ್  ಮೇ  ಸುರವಂದಿತಃ ।।೪।।

ಸ್ಕಂದೌಪ್ರಭಾಕರಃ  ಪಾತು , ವಕ್ಷಃ ಪಾತು ಜನಪ್ರಿಯಃ ।

ಪಾತು ಪಾದೌ ದ್ವಾದಶಾತ್ಮಾ , ಸರ್ವಾಂಗಃ  ಸಕಲೇಶ್ವರಃ ।।೫।।

ಸೂರ್ಯ ರಕ್ಷಾಕರಂ  ಸ್ತೋತ್ರಂ , ಲಿಖಿತ್ವಾ  ಭೂರ್ಜ  ಪತ್ರಿಕೆ ।

ದದಾತಿ ಯಃ ಕರೆ ತಶ್ಯಾವಶಗಾಃ  ಸರ್ವಸಿದ್ಧಯಃ ।।೬।।

ಸುಸ್ನಾತೊಯೋ  ಜಪೇತ್ಸಮ್ಯಗ್ಯೋsಧೀತೆ  ಸ್ವಸ್ಥ  ಮಾನಸಃ ।

ಸ ರೋಗಮುಕ್ತೋ  ಧೀರ್ಘಾಯುಃ , ಸುಖಂ  ಪುಷ್ಟಿಶ್ಚ  ವಿಂದತಿ ।।೭।।

ಇತಿ ಶ್ರೀಮದ್ಯಾಜ್ಞವಲ್ಕ್ಯ  ವಿರಚಿತಂ ಸೂರ್ಯಕವಚ ಸ್ತೋತ್ರಂ ಸಂಪೂರ್ಣಂ

***********


ಭಾವಾರ್ಥ :

ಯಾಜ್ಞವಲ್ಕ್ಯರು  ಹೇಳಿದ್ದು -

ಕೇಳೈ  ಮುನಿಶಾರ್ದೂಲನೆ , ಶುಭಪ್ರದವೂ ಶರೀರಕ್ಕೆ ಆರೋಗ್ಯವನ್ನು  ಕೊಡತಕ್ಕದ್ದು ದಿವ್ಯವೂ ಮತ್ತು ಎಲ್ಲ ಸೌಭಾಗ್ಯಗಳನ್ನು ಕೊಡತಕ್ಕದ್ದೂ   ಆದ ಸೂರ್ಯಕವಚವನ್ನು ।।೧।।

ಒಳ್ಳೆ ದೀಪ್ತಿಮಂತವಾದ ಮುಕುಟವನ್ನು ಧರಿಸಿದವನೂ  ಹೊಳೆಯುವ ಮೀನಿನಾಕಾರದ ಕುಂಡಲಗಳುಳ್ಳವನೂ  ಆದ ಸಾವಿರ  ಕಿರಣಗಳುಳ್ಳವ (ಸೂರ್ಯ )ನನ್ನು  ಧ್ಯಾನಿಸಿ , ಈ  ಸ್ತೋತ್ರವನ್ನು ಪಠಿಸಬೇಕು ।।೨।।

ಶಿರವನ್ನು  ಭಾಸ್ಕರನೂ  ಹಣೆಯನ್ನು ಅಮಿತದ್ಯುತಿಯೂ , ಕಣ್ಣುಗಳನ್ನು ದಿನಮಣಿಯೂ  ಕಿವಿಗಳನ್ನು ವಾಸರೇಶ್ವರನೂ ಸಂರಕ್ಷಿಸಲಿ  ।।೩।।

ಮೂಗನ್ನು ಧರ್ಮ ಘ್ರುಣಿಯೂ  ಬಾಯಿಯನ್ನು ವೇದವಾಹನನೂ  ನಾಲಿಗೆಯನ್ನು ಮಾನದನೂ ಕಂಠವನ್ನು  ಸುರವಂದಿತನೂ
ಕಾಪಾಡಲಿ ।।೪।।

ಹೆಗಲುಗಳನ್ನು  ಪ್ರಭಾಕರನೂ  ಎದೆಯನ್ನು  ಜನಪ್ರಿಯನೂ ಪಾದಗಳನ್ನು  ದ್ವಾದಶಾತ್ಮನೂ  ಸರ್ವಾಂಗವನ್ನು  ಸಕಲೇಶ್ವರನೂ  ಕಾಯಲಿ ।।೫।।

ಸೂರ್ಯ ರಕ್ಶಾತ್ಮಕವಾದ ಈ ಸ್ತೋತವನ್ನು  ಭೂರ್ಜ  ಪತ್ರದಲ್ಲಿ ಬರೆದು ಯಾವನು ಕೈಯಲ್ಲಿ ಕಟ್ಟಿ ಕೊಳ್ಳುವನೋ  ಅವನಿಗೆ ಎಲ್ಲ ಸಿದ್ಧಿಗಳೂ  ವಶವಾಗುವವೂ ।।೬।।

ಒಳ್ಳೆ ಬಗೆಯಾಗಿ ಸ್ನಾನ ಮಾಡಿ , ಸ್ವಸ್ಥವಾದ ಮನದಿಂದ ಯಾವನು ಚೆನ್ನಾಗಿ ಜಪಿಸುವನೋ , ಕಲಿಯುವನೋ , ಅವನು ರೋಗಮುಕ್ತನಾಗಿ ಧೀರ್ಘಾಯುವಾಗುವನು  ಮತ್ತು ಸುಖವನ್ನೂ  ಪುಷ್ಟಿಯನ್ನು  ಹೊಂದುವನು ।।೭।।
*******