Showing posts with label ಜಾಗ್ರತ ಪಂಚಕಮ್ ಆದಿ ಶಂಕರಾಚಾರ್ಯ ಕೃತಂ JAGRATA PANCHAKAM. Show all posts
Showing posts with label ಜಾಗ್ರತ ಪಂಚಕಮ್ ಆದಿ ಶಂಕರಾಚಾರ್ಯ ಕೃತಂ JAGRATA PANCHAKAM. Show all posts

Sunday, 24 October 2021

ಜಾಗ್ರತ ಪಂಚಕಮ್ ಆದಿ ಶಂಕರಾಚಾರ್ಯ ಕೃತಂ JAGRATA PANCHAKAM

jagrata panchakam


 ಎಚ್ಚರಿಕೆಯ ಏಳು ಗಂಟೆಗಳು !!!


ಆದಿ ಶಂಕರಾಚಾರ್ಯ ವಿರಚಿತ :


-೧-


ಮಾತಾ ನಾಸ್ತಿ ಪಿತಾ ನಾಸ್ತಿ, ನಾಸ್ತಿ ಬಂಧು ಸಹೋದರ:|

ಅರ್ಥಂ ನಾಸ್ತಿ ಗೃಹಂ ನಾಸ್ತಿ " 

ತಸ್ಮಾತ್ ಜಾಗ್ರತ ಜಾಗ್ರತ"||


ತಾಯಿ-ತಂದೆ,ಬಂಧು-ಸಹೋದರ, ಹಣ, ಮನೆ, ಯಾವುದೂ ಸತ್ಯವಲ್ಲ , ಆದ್ದರಿಂದ ಹುಷಾರಾಗಿರಿ, ಎಚ್ಚರಿಕೆ, ಎಚ್ಚರಿಕೆ!!


-೨- 


ಜನ್ಮ ದು:ಖಂ ಜರಾ ದುಖಂ, ಜಾಯಾ ದು:ಖಂ ಪುನ: ಪುನ:|ಸಂಸಾರ ಸಾಗರಂ ದುಖಂ,

ತಸ್ಮಾತ್ ಜಾಗ್ರತ ಜಾಗ್ರತ||


ಜನ್ಮವೂ ದು:ಖವೇ, ಮುಪ್ಪೂ ದು:ಖವೇ, ಪತ್ನಿಯೂ ದು:ಖವೇ, ಇಷ್ಟೇ ಏಕೆ? ಸಂಸಾರ ಸಾಗರವೇ ದು:ಖ,ನೆನಪಿರಲಿ,ಎಚ್ಚರಿಕೆ, ಎಚ್ಚರಿಕೆ!!


-೩-


ಕಾಮ: ಕ್ರೋಧಶ್ಚ ಲೋಭಶ್ಚ ದೇಹೇ ತಿಷ್ಠಂತಿ ತಸ್ಕರಾ:|

ಜ್ಞಾನರತ್ನಾಪಹಾರಾಯ 

ತಸ್ಮಾತ್ ಜಾಗ್ರತ ಜಾಗ್ರತ||


ಕಾಮಕ್ರೋಧಗಳೆಂಬ ಕಳ್ಳರು ನಿನ್ನೊಳಗೇ ಇರುವ ಜ್ಞಾನರತ್ನವನ್ನು ಅಪಹರಿಸುವುದಕ್ಕಾಗಿ ಹೊಂಚುಹಾಕುತ್ತಿದ್ದಾರೆ.ಎಚ್ಚರಿಕೆ, ಎಚ್ಚರಿಕೆ!!


-೪-


ಆಶಯಾ ಬಧ್ಯತೇ ಲೋಕ: ಕರ್ಮಣಾ ಬಹು ಚಿಂತಯಾ|

ಆಯು: ಕ್ಷೀಣಂ ನ ಜಾನಾತಿ 

ತಸ್ಮಾತ್ ಜಾಗ್ರತ ಜಾಗ್ರತ||


ಆಶೆಯಿಂದ, ಕರ್ಮದಿಂದ,ಚಿಂತೆಯಿಂದ ಮನುಷ್ಯನು ಬದ್ಧನಾಗಿರುತ್ತಾನೆ. ಆಯುಷ್ಯವು ಸವೆಯುತ್ತಿದ್ದರೂ ಅದನ್ನು ಗಮನಿಸುತ್ತಿಲ್ಲ,ಎಚ್ಚರಿಕೆ, ಎಚ್ಚರಿಕೆ!!


-೫-


ಸಂಪದ: ಸ್ವಪ್ನಸಂಕಾಶಾ:,ಯೌವನಂ ಕುಸುಮೋಪಮಮ್|

ವಿದ್ಯುಚ್ಚಂಚಲಮಾಯುಷ್ಯಂ 

ತಸ್ಮಾತ್ ಜಾಗ್ರತ ಜಾಗ್ರತ||


ಸಂಪತ್ತು ಸ್ವಪ್ನಸಮಾನ, ಯೌವನವು ಹೂವಿನಂತೆ ಬಾಡುತ್ತಿದೆ, ಆಯುಷ್ಯವಂತೂ ಮಿಂಚಿನಂತೆ ಹಾರಿಹೋಗುತ್ತಿದೆ,ಎಚ್ಚರಿಕೆ, ಎಚ್ಚರಿಕೆ!!


-೬-


ಕ್ಷಣಂ ವಿತ್ತಂ, ಕ್ಷಣಂ ಚಿತ್ತಂ,ಕ್ಷಣಂ ಜೀವಿತಮೇವಚ|

ಯಮಸ್ಯ ಕರುಣಾ ನಾಸ್ತಿ,

ತಸ್ಮಾತ್ ಜಾಗ್ರತ ಜಾಗ್ರತ||


ವಿತ್ತ, ಚಿತ್ತ,ಜೀವಿತ ಎಲ್ಲವೂ ಕ್ಷಣಿಕವೇ.ಯಮನಿಗೆ ದಯೆ ಎಂಬುದಿಲ್ಲ,ಆದ್ದರಿಂದ ಎಚ್ಚರಿಕೆ, ಎಚ್ಚರಿಕೆ!!


-೭-


ಅನಿತ್ಯಾಣಿ ಶರೀರಾಣಿ ವಿಭವೋ ನೈವ ಶಾಶ್ವತಾ:|

ನಿತ್ಯಂ ಸನ್ನಿಹಿತೋ ಮೃತ್ಯು:, 

ತಸ್ಮಾತ್ ಜಾಗ್ರತ ಜಾಗ್ರತ||


ದೇಹಗಳು ಅನಿತ್ಯ,ಸಂಪತ್ತೆಲ್ಲವೂ ಅಶಾಶ್ವತ, ಮರಣವು ಹತ್ತಿರದಲ್ಲಿದೆ,ಆದ್ದರಿಂದ ಎಚ್ಚರಿಕೆ, ಎಚ್ಚರಿಕೆ!!

***