ಯಾ ಸುಗಂಧಸ್ಯನಾಸಾದಿ-ನವದ್ವಾರಾಽಖಿಲೇನ ಯಾ |
ದುರಾಧರ್ಷಾ ಸರ್ವಸಸ್ಯೋದಯಾರ್ಥಂ ಯಾ ಕರೀಷಿಣೀ || ೧ ||
ಯಾ ನಿತ್ಯಪುಷ್ಟಾ ಸರ್ವಾಂಗೈಃ
ಸೌಂದರ್ಯಾದಿಗುಣೈರಪಿ |
ಈಶ್ವರೀಂ ಸರ್ವಭೂತಾನಾಂ
ತಾಮಿಹೋಪಹ್ವಯೇ ಶ್ರಿಯಮ್ || ೨ ||
ಮಾತರ್ಲಕ್ಷ್ಮಿ ನಮಸ್ತುಭ್ಯಂ ಮಾಧವಪ್ರಿಯಮಾನಿನಿ |
ಯುವಾಂ ವಿಶ್ವಸ್ಯ ಪಿತರಾವಿತರೇತರಯೋಗಿನೌ || ೩ ||
ಸಮನಾ ಕಿಲ ಮಾತಸ್ತ್ವಮಮುನಾ ತತಯೋಗಿನೀ |
ಮಮ ನಾಥೇನ ದೇವಶ್ಚ ವಿಮನಾಶ್ಚ ನ ಸ ತ್ವಯಿ || ೪ ||
ತ್ವಂ ವೇದಮಾನಿನೀ ವೇದವೇದ್ಯಃ ಕಿಲ ಸ ತೇ ಪ್ರಿಯಃ |
ತ್ವಂ ಮೂಲಪ್ರಕೃತಿರ್ದೇವೀ ಸ ಚಾದಿಪುರುಷಃ ಕಿಲ || ೫ ||
ಯಸ್ತ್ವಾಮುರಸಿ ಧತ್ತೇಽಂಬ ಕೌಸ್ತುಭದ್ಯುತಿಭಾಸಿತೇ |
ಸತ್ವಾಂ ನೈವಾಚ್ಯುತಃ ಸರ್ವಸ್ಯಾತ್ಯಯೇ ಸತ್ಯಪಿ ತ್ಯಜೇತ್ || ೬ ||
ದೇವಿ ತ್ವಂ ಲಲನಾರತ್ನಂ ದೇವೋಽಸೌ ಪುರುಷೋತ್ತಮಃ |
ಯುವಾಂ ಯುವಾನೌ ಸತತಂ ಯುವಯೋರ್ನ ವಯೋಽಧಿಕಃ || ೭ ||
ತ್ವಂ ಪದ್ಮಿನೀಪದ್ಮವಕ್ತ್ರಾ ಪದ್ಮಾಕ್ಷೀ ಪದ್ಮವಿಷ್ಟರಾ |
ಪದ್ಮದ್ವಯಧರಾ ಪದ್ಮ ಕೋಶೋದ್ಯತ್ಸ್ತನಶೋಭನಾ || ೮ ||
ಪದ್ಮಹಸ್ತಾ ಪದ್ಮಪಾದಾ ಪದ್ಮನಾಭಮನಃಪ್ರಿಯಾ |
ಪದ್ಮೋದ್ಭವಸ್ಯ ಜನನೀ ಪದ್ಮಾ ಚ ವರವರ್ಣಿನೀ || ೯ ||
ಅಂಬಾಂ ಪೀತಾಂಬರಶ್ರೋಣೀಂ ಲಂಬಾಲಕಲಸನ್ಮುಖೀಂ |
ಬಿಂಬಾಧರೋಷ್ಠೀಂ ಕಸ್ತೂರಿ-ಜಂಬಾಲತಿಲಕಾಂ ಭಜೇ || ೧೦ ||
ರತ್ನೋದ್ದೀಪ್ತಸುಮಾಂಗಲ್ಯ-ಸೂತ್ರಾವೃತಶಿರೋಧರಾಮ್ |
ಕುಂಡಲಪ್ರಭಯೋದ್ದಂಡ-ಗಂಡಮಂಡಲಮಂಡಿತಾಮ್ || ೧೧ ||
ಕುಚಕಂಚುಕ ಸಂಚಾರಿ-ಹಾರನಿಷ್ಕಮನೋಹರಾಮ್ |
ಕಾಂಚೀ-ಕಿಂಕಿಣಿ-ಮಂಜೀರ-ಕಂಕಣಾದ್ಯೈರಲಂಕೃತಾಮ್ || ೧೨ ||
ಸುವರ್ಣಮಂಟಪೇ ರತ್ನಚಿತ್ರಸಿಂಹಾಸನೋತ್ತಮೇ |
ನಮಾಮಿ ಹರಿಣಾ ಸಾಕಮಿಂದಿರಾಂ ಕೃತಮಂದಿರಾಮ್ || ೧೩ ||
ಬ್ರಹ್ಮಾದ್ಯಾ ವಿಬುಧಶ್ರೇಷ್ಠಾಃ
ಬ್ರಹ್ಮಾಣ್ಯಾದ್ಯಾಃ ಸುರಾಂಗನಾಃ |
ಯಾಂ ಪೂಜಯಂತೇ ಸೇವಂತೇ
ಸಾ ಮಾಂ ಪಾತು ರಮಾ ಸದಾ || ೧೪ ||
ಸರ್ವಾಲಂಕಾರ ಭರಿತೌ ಸರ್ವಜ್ಞೌ ಸರ್ವಸದ್ಗುಣೌ |
ಶರ್ವಾದಿಸರ್ವಭಕ್ತೌಘ ಸರ್ವಸರ್ವಸ್ವದಾಯಕೌ || ೧೫ ||
ಸುಮುಖೌ ಸುಂದರತನೌ ಸುನಾಸೌ ಸುಖಚಿತ್ತನೂ |
ಸುರಾರಾಧಿತಪಾದಾಬ್ಜೌ ರಮಾನಾರಾಯಣೌ ಸ್ತುಮಃ || ೧೬ ||
ಚತುಷ್ಕಪರ್ದಾ ಯಾ ದೇವೀ ಚತುರಾಸ್ಯಾದಿಭಿಃ ಸ್ತುತಾ |
ಚತುರ್ವೇದೋದಿತಗುಣಾ ಚತುರ್ಮೂರ್ತೇರ್ಹರೇಃ ಪ್ರಿಯಾ || ೧೭ ||
ಘೃತಪ್ರತೀಕಾಂ ತಾಂ ನಿತ್ಯಂ ಘೃತಪೂರ್ಣಾನ್ನದಾಯಿನೀಮ್ |
ಯಥೇಷ್ಟವಿತ್ತದಾತ್ರೀಂ ಚ ನತೋಽಸ್ಮ್ಯಭಯದಾಂ ಶ್ರಿಯಮ್ || ೧೮ ||
ವಾದಿರಾಜೇನ ರಚಿತಂ ಶ್ರೀಶ್ರೀಶಗುಣದರ್ಪಣಮ್ |
ಇಮಂ ಸ್ತವಂ ಪಠನ್ ಮರ್ತ್ಯಃ ಶ್ರೀಮಾನ್ ಸ್ಯಾನ್ನಾತ್ರ ಸಂಶಯಃ || ೧೯ ||
|| ಇತಿ ಶ್ರೀವಾದಿರಾಯಯತಿಕೃತಂ ಶ್ರೀಶ್ರೀಶಗುಣದರ್ಪಣ ಸ್ತೋತ್ರಂ ಸಂಪೂರ್ಣಮ್ ||
***
ಶ್ರೀಶ್ರೀಶಗುಣದರ್ಪಣ
ಆರ್ಥಿಕ ಬಾಧೆ ಹಾಗೂ ದಾರಿದ್ರ್ಯನಿರ್ಮೂಲನಕ್ಕಾಗಿ ಶ್ರೀವಾದಿರಾಜರಿಂದ ಮೂಡಿಬಂದ ಶ್ರೀಶಗುಣದರ್ಪಣವಂತೂ ಯಾವುದೇ ತೆರನಾದ ಬಡತನವಿದ್ದರೂ ತೊಡೆದುಹಾಕುವ ಬ್ರಹ್ಮಾಸ್ತ್ರ ಎಂದು ಜ್ಞಾನಿಗಳು ಈ ಕೃತಿಯನ್ನು ಹೃತ್ಪೂರ್ವಕವಾಗಿ ಸ್ಮರಿಸುತ್ತಾರೆ.
ವಿಜಯನಗರ ಸಾಮ್ರಾಜ್ಯದ ಬೊಕ್ಕಸ ಬರಿದಾಗಿದ್ದ ಸಂದರ್ಭದಲ್ಲಿ ಆಗಿನ ಅರಸನಾಗಿದ್ದ ಅಚ್ಯುತರಾಯನು ತೀವ್ರ ಚಿಂತೆಯಲ್ಲಿದ್ದ.ಆ ಸಂದರ್ಭದಲ್ಲಿ ವಿಜಯನಗರ ಸಂಸ್ಥಾನಕ್ಕೆ ಆಗಮಿಸಿದ ಶ್ರೀವಾದಿರಾಜರು ಸಾಮ್ರಾಜ್ಯದ ಪರಿಸ್ಥಿತಿ ಹಾಗೂ ಅಚ್ಯುತರಾಯ ಅರಸನ ನೋವನ್ನು ತಿಳಿದುಕೊಂಡರು.ಅರಸನ ಪ್ರಾರ್ಥನೆಯ ಮೇರೆಗೆ ಶ್ರೀಶಗುಣದರ್ಪಣ ಮಂತ್ರವನ್ನು ಅರಸನಿಗೆ ಉಪದೇಶಿಸಿ ಬರಿದಾಗಿದ್ದ ಬೊಕ್ಕಸವನ್ನು ಶ್ರೀವಾದಿರಾಜರು ಮತ್ತೆ ತುಂಬಿಸಿದ ಘಟನೆ ಶ್ರೀವಾದಿರಾಜರ ಅಪೂರ್ವ ಮಹಿಮೆಯ ಕೃತಿಗಳಲ್ಲಿ ದಾಖಲಾಗಿದೆ.
ಯಾ-ಸುಗಂಧಾಸ್ಯನಾಸಾದಿ-ನವದ್ವಾರಾಽಖಿಲೇನ ಯಾ |
ದುರಾಧರ್ಷಾ ಸರ್ವಸಸ್ಯೋದಯಾರ್ಥಂ ಯಾ ಕರೀಷಿಣೀ || ೧ ||
ಯಾ ನಿತ್ಯಪುಷ್ಟಾ ಸರ್ವಾಂಗೈಃ ಸೌಂದರ್ಯಾದಿಗುಣೈರಪಿ |
ಈಶ್ವರೀಂ ಸರ್ವಭೂತಾನಾಂ ತಾಮಿಹೋಪಹ್ವಯೇ ಶ್ರಿಯಮ್ || ೨ ||
ಮಾತರ್ಲಕ್ಷ್ಮಿ ನಮಸ್ತುಭ್ಯಂ ಮಾಧವಪ್ರಿಯಮಾನಿನಿ |
ಯುವಾಂ ವಿಶ್ವಸ್ಯ ಪಿತರಾವಿತರೇತರಯೋಗಿನೌ || ೩ ||
ಸಮನಾ ಕಿಲ ಮಾತಸ್ತ್ವಮಮುನಾ ತತಯೋಗಿನೀ |
ಮಮ ನಾಥೇನ ದೇವಶ್ಚ ವಿಮನಾಶ್ಚ ನ ಸ ತ್ವಯಿ || ೪ ||
ತ್ವಂ ವೇದಮಾನಿನೀ ವೇದವೇದ್ಯಃ ಕಿಲ ಸ ತೇ ಪ್ರಿಯಃ |
ತ್ವಂ ಮೂಲಪ್ರಕೃತಿರ್ದೇವೀ ಸ ಚಾದಿಪುರುಷಃ ಕಿಲ || ೫ ||
ಯಸ್ತ್ವಾಮುರಸಿ ಧತ್ತೇಽಂಬ ಕೌಸ್ತುಭದ್ಯುತಿಭಾಸಿತೇ |
ಸತ್ವಾಂ ನೈವಾಚ್ಯುತಃ ಸರ್ವಸ್ಯಾತ್ಯಯೇ ಸತ್ಯಪಿ ತ್ಯಜೇತ್ || ೬ ||
ದೇವಿ ತ್ವಂ ಲಲನಾರತ್ನಂ ದೇವೋಽಸೌ ಪುರುಷೋತ್ತಮಃ |
ಯುವಾಂ ಯುವಾನೌ ಸತತಂ ಯುವಯೋರ್ನ ವಯೋಽಧಿಕಃ || ೭ ||
ತ್ವಂ ಪದ್ಮಿನೀಪದ್ಮವಕ್ತ್ರಾ ಪದ್ಮಾಕ್ಷೀ ಪದ್ಮವಿಷ್ಟರಾ |
ಪದ್ಮದ್ವಯಧರಾ ಪದ್ಮ ಕೋಶೋದ್ಯತ್ಸ್ತನಶೋಭನಾ || ೮ ||
ಪದ್ಮಹಸ್ತಾ ಪದ್ಮಪಾದಾ ಪದ್ಮನಾಭಮನಃಪ್ರಿಯಾ |
ಪದ್ಮೋದ್ಭವಸ್ಯ ಜನನೀ ಪದ್ಮಾ ಚ ವರವರ್ಣಿನೀ || ೯ ||
ಅಂಬಾಂ ಪೀತಾಂಬರಶ್ರೋಣೀಂ ಲಂಬಾಲಕಲಸನ್ಮುಖೀಂ |
ಬಿಂಬಾಧರೋಷ್ಠೀಂ ಕಸ್ತೂರಿ-ಜಂಬಾಲತಿಲಕಾಂ ಭಜೇ || ೧೦ ||
ರತ್ನೋದ್ದೀಪ್ತಸುಮಾಂಗಲ್ಯ-ಸೂತ್ರಾವೃತಶಿರೋಧರಾಮ್ |
ಕುಂಡಲಪ್ರಭಯೋದ್ದಂಡ-ಗಂಡಮಂಡಲಮಂಡಿತಾಮ್ || ೧೧ ||
ಕುಚಕಂಚುಕ ಸಂಚಾರಿ-ಹಾರನಿಷ್ಕಮನೋಹರಾಮ್ |
ಕಾಂಚೀ-ಕಿಂಕಿಣಿ-ಮಂಜೀರ-ಕಂಕಣಾದ್ಯೈರಲಂಕೃತಾಮ್ || ೧೨ ||
ಸುವರ್ಣಮಂಟಪೇ ರತ್ನಚಿತ್ರಸಿಂಹಾಸನೋತ್ತಮೇ |
ನಮಾಮಿ ಹರಿಣಾ ಸಾಕಮಿಂದಿರಾಂ ಕೃತಮಂದಿರಾಮ್ || ೧೩ ||
ಬ್ರಹ್ಮಾದ್ಯಾ ವಿಬುಧಶ್ರೇಷ್ಠಾಃ ಬ್ರಹ್ಮಾಣ್ಯಾದ್ಯಾಃ ಸುರಾಂಗನಾಃ |
ಯಾಂ ಪೂಜಯಂತೇ ಸೇವಂತೇ ಸಾ ಮಾಂ ಪಾತು ರಮಾ ಸದಾ || ೧೪ ||
ಸರ್ವಾಲಂಕಾರ ಭರಿತೌ ಸರ್ವಜ್ಞೌ ಸರ್ವಸದ್ಗುಣೌ |
ಶರ್ವಾದಿಸರ್ವಭಕ್ತೌಘ ಸರ್ವಸರ್ವಸ್ವದಾಯಕೌ || ೧೫ ||
ಸುಮುಖೌ ಸುಂದರತನೌ ಸುನಾಸೌ ಸುಖಚಿತ್ತನೂ |
ಸುರಾರಾಧಿತಪಾದಾಬ್ಜೌ ರಮಾನಾರಾಯಣೌ ಸ್ತುಮಃ || ೧೬ ||
ಚತುಷ್ಕಪರ್ದಾ ಯಾ ದೇವೀ ಚತುರಾಸ್ಯಾದಿಭಿಃ ಸ್ತುತಾ |
ಚತುರ್ವೇದೋದಿತಗುಣಾ ಚತುರ್ಮೂರ್ತೇರ್ಹರೇಃ ಪ್ರಿಯಾ || ೧೭ ||
ಘೃತಪ್ರತೀಕಾಂ ತಾಂ ನಿತ್ಯಂ ಘೃತಪೂರ್ಣಾನ್ನದಾಯಿನೀಮ್ |
ಯಥೇಷ್ಟವಿತ್ತದಾತ್ರೀಂ ಚ ನತೋಽಸ್ಮ್ಯಭಯದಾಂ ಶ್ರಿಯಮ್ || ೧೮ ||
ವಾದಿರಾಜೇನ ರಚಿತಂ ಶ್ರೀಶ್ರೀಶಗುಣದರ್ಪಣಮ್ |
ಇಮಂ ಸ್ತವಂ ಪಠನ್ ಮರ್ತ್ಯಃ ಶ್ರೀಮಾನ್ ಸ್ಯಾನ್ನಾತ್ರ ಸಂಶಯಃ || ೧೯ ||
|| ಇತಿ ಶ್ರೀವಾದಿರಾಜಯತಿಕೃತಂ
ಶ್ರೀಶ್ರೀಶಗುಣದರ್ಪಣ ಸ್ತೋತ್ರಂ ಸಂಪೂರ್ಣಮ್ ||
**
ವಾಧಿರಾಜರಿಂದ
ರುಕ್ಮಿಣೀಶ ವಿಜಯ, ಶ್ರೀಶಗುಣದರ್ಪಣ, ತಾಯಿಯ ಹರಕೆಯ ಲಕ್ಷಾಭರಣ ಗ್ರಂಥ ರಚನೆ
ವಾದಿರಾಜರ ಗ್ರಂಥಗಳಲ್ಲಿಲ ಮಾತುಗಳ ಸೊಗಸು ವಿಶಿಷ್ಟ ಗುಣ. ಹಯಗ್ರೀವ ದೇವರಲ್ಲಿ ವಾದಿರಾಜರಿಗೆ ತುಂಬಾ ಭಕ್ತಿ. ಅಶ್ವಧಾಟಿಯಲ್ಲಿ ಅವರು ರಚಿಸಿರುವ ಅನೇಕ ಕೃತಿಗಳನ್ನು ಹೇಳುತ್ತಿದ್ದರೆ-ಹಾಡುತ್ತಿದ್ದರೆ ಕೇಳುವವರ ಮನಸ್ಸಿನಲ್ಲಿ ಭಕ್ತಿ ಉಕ್ಕುತ್ತದೆ. ಸಾಮಾನ್ಯ ಜನರ ಮನಸ್ಸಿಗೆ ತಟ್ಟುವ ಹಾಗೆ ಸುಂದರವಾದ ಕೃತಿಗಳನ್ನು ಅವರು ಬರೆದರು; ಪಂಡಿತರು ಮೆಚ್ಚುವಂತೆಯೂ ಕಾವ್ಯವನ್ನು ಬರೆಯುವ ಶಕ್ತಿ ಅವರಿಗಿತ್ತು. ಅವರ ರುಕ್ಮಿಣೀಶ ವಿಜಯ ಎಂಬ ಕಾವ್ಯವನ್ನು ಮಹಾ ವಿದ್ವಾಂಸರೂ ಮೆಚ್ಚುತ್ತಾರೆ. ಇದನ್ನು ಅವರು ಬರೆದುದನ್ನು ಕುರಿತೇ ಒಂದು ಕಥೆ ಇದೆ.
ಮಾಘ ಎಂಬ ಕವಿ ಶಿಶುಪಾಲ ವಧೆ ಎಂಬ ಕಾವ್ಯವನ್ನು ಬರೆದ. ಶ್ರೀಕೃಷ್ಣನು ಶಿಶುಪಾಲನನ್ನು ಕೊಂದು ರುಕ್ಮಿಣಿಯನ್ನು ಮದುವೆಯಾದದ್ದು ಇದರ ಕಥೆ. ಇದನ್ನು ಅನೇಕ ವಿದ್ವಾಂಸರು ಹೊಗಳಿದರು. ಪೂನಾ ನಗರದಲ್ಲಿ ಈ ಕಾವ್ಯವನ್ನು ಆನೆಯ ಮೇಲಿಟ್ಟು ಮೆರವಣಿಗೆ ಮಾಡಿ ಗೌರವಿಸಲು ಏರ್ಪಾಟಾಗಿತ್ತು. ವಾದಿರಾಜರು ” ಈ ಕಾವ್ಯದಲ್ಲಿ ಅನೇಕ ದೋಷಗಳಿವೆ” ಎಂದರು. ಹಲವರಿಗೆ ಕೋಪ ಬಂದಿತು: ಇದಕ್ಕಿಂತ ಒಳ್ಳೆಯ ಕಾವ್ಯ ಇವರು ಬರೆಯಬಲ್ಲರೆ? ಎಂದು ಆಕ್ಷೇಪಣೆ ಮಾಡಿದರು. ವಾದಿರಾಜರು ಅದೇ ಕಥೆಯನ್ನು ತೆಗೆದುಕೊಂಡು ಸುಂದರವಾದ ಕಾವ್ಯ ಬರೆದರು. ಅಲ್ಲದೆ, ’ಶಿಶುಪಾಲವಧೆ’ ಎಂಬ ಹೆಸರಿನಲ್ಲಿ ಸಾವಿನ ಪ್ರಸ್ತಾಪ ಇದೆ: ಶ್ರೀಕೃಷ್ಣನ ಮದುವೆಯ ಕಥೆಯ ಹೆಸರಿನಲ್ಲಿ ಇದು ಬೇಡ ಎಂದು ರುಕ್ಮಿಣೀಶ ವಿಜಯ ಎಂದು ಮಂಗಳವನ್ನು ಸೂಚಿಸುವ ಹೆಸರನ್ನು ಕೊಟ್ಟರು. ಹದಿನೇಳೇ ದಿನಗಳಲ್ಲಿ ಕಾವ್ಯವನ್ನು ಮುಗಿಸಿದರು. ಇಲ್ಲಿ ಒಂದು ಸೊಗಸೆಂದರೆ ಒಂದೇ ವಾಕ್ಯಕ್ಕೆ ಬೇರೆ ಬೇರೆ ಅರ್ಥಗಳು ಇರುತ್ತವೆ ವಾಕ್ಯ ಓದಿದಾಗ ಈ ಹಲವು ಅರ್ಥಗಳು ಮನಸ್ಸಿಗೆ ಬರುತ್ತವೆ. ಪೂನಾ ನಗರದ ವಿದ್ವನ್ಮಣಿಗಳು ಅದನ್ನು ಪರಿಶೀಲಿಸಿ ತಲೆದೂಗಿ ಅದಕ್ಕೆ ವಿಶೇಷ ಮರ್ಯಾದೆಯನ್ನು ಮಾಡಿದರು. ಈ ಕಾವ್ಯ ವಾದಿರಾಜರು ಎಂತಹ ದೊಡ್ಡ ಕವಿಗಳು, ಅವರ ಭಕ್ತಿ ಎಷ್ಟು ಆಳವಾದದ್ದು ಎಂಬುದನ್ನು ತೋರಿಸುತ್ತದೆ.
ಮಹಾಭಾರತ ಲಕ್ಷಾಲಂಕಾರವೆಂಬ ಗ್ರಂಥ ಅಪೂರ್ವ ಇತಿಹಾಸ ಉಳ್ಳದ್ದಾಗಿದೆ. ತಾಯಿ ಗೌರಮ್ಮ ಗಂಡು ಮಗು ಹುಟ್ಟಿದರೆ ಭೂವರಾಹ ಸ್ವಾಮಿಗೆ ಲಕ್ಷಾಲಂಕಾರ ಮಾಡಿಸಿ ಸಮರ್ಪಿಸುವೆನೆಂದು ಹರಕೆ ಹೊತ್ತಿದ್ದಳಷ್ಟೆ? ಹರಕೆ ನಡೆಸಲು ಸಾಧ್ಯವೇ ಎಂಬ ಆಲೋಚನೆಯೇ ಮಾಡಲಿಲ್ಲ. ಮಗುವಿನ ಆಸೆಯಿಂದ ಮಾಡಿಕೊಂಡ ಹರಕೆಯಿದು. ದೇವರಿಗೆ ಲಕ್ಷಾಭರಣ ಮಾಡಿಸುವ ಚೈತನ್ಯ ಆ ಕುಟುಂಬಕ್ಕಿರಲಿಲ್ಲ. ಅದು ಹಾಗೇ ಉಳಿದಿತ್ತು. ಮಗ ಬಹು ಪ್ರಸಿದ್ಧ ಪಂಡಿತಾದ, ದೊಡ್ಡ ಪೀಠಾಧಿಪತಿಯಾದ, ಮಹಿಮಾವಂತನಾದ. ತಾಯಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಆಗ ತನ್ನ ಬಹು ದಿನಗಳಿಂದ ಉಳಿದಿದ್ದಲ ಹರಕೆಯ ವಿಷಯವನ್ನು ಮಗನಲ್ಲಿ ಹೇಳಿಕೊಂಡಳು. ವಾದಿರಾಜರು ಅಪೂರ್ವ ಶ್ರೇಷ್ಠ ರೀತಿಯಲ್ಲಿ ತಾಯಿಯ ಹರಕೆಯನ್ನು ಸಲ್ಲಿಸಿಕೊಟ್ಟರು.
ಮಹಾಭಾರತದಲ್ಲಿ ದೊಡ್ಡ ವಿದ್ವಾಂಸರಿಗೂ ಅರ್ಥವಾಗದ ಕೆಲವು ಭಾಗಗಳಿವೆ. ವಾದಿರಾಜರು ಈ ಭಾಗಗಳು ಅರ್ಥವಾಗುವಂತೆ ಒಂದು ಗ್ರಂಥವನ್ನೆ ಬರೆದು, ಅದನ್ನೇ ಭೂವರಾಹ ಸ್ವಾಮಿಗೆ ಅರ್ಪಿಸಿದರು. ಭಾರತವನ್ನು ಬರೆದ ಶ್ರೀ ವೇದವ್ಯಾಸರ ಹೃದಯವನ್ನು ಹೊರಗೆಡಹುವ ಗ್ರಂಥವಾಯಿತು ಇದು. ವಾದಿರಾಜರು ಲಕ್ಷ ಆಭರಣಗಳನ್ನು ಮಾಡಿ ದೇವರಿಗೆ ಒಪ್ಪಸಬಹುದಾಗಿತ್ತು. ಆ ಶಕ್ತಿ ಅವರಿಗೆ ಇತ್ತು. ಅವರ ಕಾಲಕ್ಕೆ ಅವರ ಮಠ ಸಂಪತ್ತಿನಿಂದ ತುಂಬಿತ್ತು. ಎಷ್ಟೋ ಆಭರಣಗಳನ್ನು ಮಾಡಿಸಿ ಹಯವದನನನ್ನೂ ಭೂವರಾಹನನ್ನೂ ಅಲಂಕರಿಸಿ ಪೂಜಿಸಿದ್ದರು. ಆದರೆ ಮಹಾಭಾರತದಂತಹ ಬಹು ಪವಿತ್ರ ಗ್ರಂಥ ಜನರಿಗೆ ಅರ್ಥವಾಗುವಂತೆ ಮಾಡಿದರೆ ದೇವರಿಗೂ ಸಂತೋಷ, ಲಕ್ಷ ಆಭರಣಕ್ಕಿಂತ ಇಂತಹ ಸೇವೆಯಿಂದಲೇ ಭಗವಂತನಿಗೆ ತೃಪ್ತಿ ಎನ್ನಿಸಿತು ಅವರಿಗೆ. ಇವರ ಸೇವೆ ಹೊಸ ರೀತಿಯದು, ಜ್ಞಾನವೇ ಬೆಳಕು, ಜ್ಞಾನಕ್ಕೆ ಸಮಾನವಾದುದಿಲ್ಲ ಎಂಬುದನ್ನು ತೋರಿಸಿಕೊಡುವ ಸೇವೆ.
ಶ್ರೀ ಶ್ರೀಶಗುಣದರ್ಪಣ ಎಂಬುದು ಮಹಾಲಕ್ಷ್ಮೀ ಸ್ತುತಿ.ಇದನ್ನು ಈಗಲೂ ಸೋದೆಯ ತ್ರಿವಿಕ್ರಮ ದೇವರ ಗುಡಿಯಲ್ಲಿರುಮ ಮಹಾಲಕ್ಷ್ಮೀ ದೇವಿಗೆ ಕುಂಕುಮಾರ್ಚನೆ ಮಾಡುವಾಗ ಪಠಿಸುವ ಪದ್ಧತಿಯಿದೆ.
ಇದು ರಚನೆಯಾದುದು ಒಂದು ವಿಶಿಷ್ಟ ಸನ್ನಿವೇಶದಲ್ಲಿ. ಒಮ್ಮೆ ಕಡುಬಡವನೊಬ್ಬ ವಾದಿರಾಜರ ಬಳಿಗೆ ಬಂದು ದುಃಖ ದೈನ್ಯಗಳಿಂದ ತನ್ನ ದಾರಿದ್ರ್ಯ ರೋಗಕ್ಕೆ ಲಕ್ಷ್ಮೀಸ್ತುತಿಯೇ ಚಿಕಿತ್ಸೆ ಎಂದು ತಿಳಿದರು. ತಾವೇ ಒಂದು ಸ್ತುತಿಯನ್ನು ರಚಿಸಿ, ಅವನಿಗೆ ಉಪದೇಶ ಮಾಡಿದರು. ’ಇದನ್ನು ಭಕ್ತಿಯಿಂದ ಪಾರಾಯಣ ಮಾಡು’ ಎಂದು ಅಪ್ಪಣೆ ಮಾಡಿದರು. ಶ್ರೀ ಶ್ರೀಶಗಣದರ್ಪಣವೆಂಬ ಈ ಲಕ್ಷ್ಮೀನರಾಯಣರ ಸ್ತೋತ್ರ ಸಂಪತ್ತನ್ನು ಕರುಣಿಸಿತು; ಭಕ್ತಿಯಿಂದ ಪಾರಾಯಣ ಮಾಡುತ್ತದದ ಅವನ ಸುತ್ತಲೂ ಬಂಗಾರದ ಮಳಯೇ ಸುರಿಯಿತು ಎಂದು ಹೇಳುತ್ತಾರೆ. ಇದರಿಂದ ವಾದಿರಾಜರ ಶಕ್ತಿ ಅಲ್ಲದೆ ಬಡವರಲ್ಲಿ ಅವರಿಗಿದ್ದ ಕರುಣೆಯೂ ತಿಳಿಯುತ್ತದೆ.
(reced in whatsapp)
***

No comments:
Post a Comment