Thursday 4 November 2021

ಸಂಕಷ್ಟನಾಶನ ವಿಷ್ಣು ಸ್ತೋತ್ರಮ್

 ಸಂಕಷ್ಟನಾಶನ ವಿಷ್ಣು ಸ್ತೋತ್ರಮ್  ||


ಶ್ರೀ ಗಣೇಶಾಯ ನಮ:| 

ನಾರದ ಉವಾಚ:-


ಪುನರ್ದೈತ್ಯಂ ಸಮಾಯಾಂತಂ ದೃಷ್ಟ್ವಾ ದೇವಾ: ಸವಾಸವಾ: |

ಭಯಪ್ರಕಂಪಿತಾ: ಸರ್ವೆ ವಿಷ್ಣುಂ ಸ್ತೋತುಂ ಪ್ರಚಕ್ರಮು:  ||೧||


ಭಾವಾರ್ಥ:-ನಾರದರು ಹೇಳಿದರು:-

ಪುನ: ಬರುತ್ತಿರುವ ದೈತ್ಯರನ್ನು ಕಂಡು ಇಂದ್ರನೊಟ್ಟಿಗೆ  ದೇವತೆಯರೆಲ್ಲರೂ ಭೀತಿಗೊಳಗಾಗಿ ವಿಷ್ಣುವನ್ನು ಸ್ತುತಿಸಲು  ಪ್ರಾರಂಬಿಸಿದರು.


ದೇವಾ ಊಚು:-

ನಮೋ ಮತ್ಸ್ಯಕೂರ್ಮಾದಿ ನಾನಾ ಸ್ವರೂಪೈ: ಸದಾಭಕ್ತ  ಕಾರ್ಯೋದ್ಯತಾಯಾರ್ತಿಹಂತ್ರೇ |

ವಿಧಾತ್ರಾದಿ ಸರ್ಗಸ್ಥಿತಿಧ್ವಂಸಕರ್ತೆ ಗದಾಶಂಖಪದ್ಮಾದಿ ಹಸ್ತಾಯ  ತೇಸ್ತು ||೨||


ಭಾವಾರ್ಥ:-ದೇವತೆಗಳು ಹೇಳುವರು:-

ಮತ್ಸ್ಯ-ಕೂರ್ಮ ಮೊದಲಾದ ನಾನಾಸ್ವರೂಪಗಳಿಂದ ಸಮಸ್ತಕಾಲವೂ  ಭಕ್ತರ ಕಾರ್ಯಗಳಲ್ಲಿ ನಿರತನಾಗಿ ಅವರ ದುರಭಿಮಾನವನ್ನು ಅಳಿಸಿ  ಉತ್ಪತ್ತಿ,ಸ್ಥಿತಿ,ಮತ್ತು ನಾಶಗಳಿಗೆ ಸ್ವಾಮಿಯಾದವನೂ,ಕೈಗಳಲ್ಲಿ  ಗದೆ,ಶಂಖ,ಪದ್ಮ,ಚಕ್ರಗಳನ್ನು ಹಿಡಿದಿರುವವನೂ ಆಗಿರುವ ವಿಷ್ಣುವೇ  ನಿನಗೆ ಪ್ರಣಾಮಗಳು.


ರಮಾವಲ್ಲಭಾಯಾಸ್ಸುರಾಣಾಂ ನಿಹಂತ್ರೇ ಭುಜಂಗಾರಿಯಾನಾಯ  ಪೀತಾಂಬರಾಯ |

ಮಖಾದಿಕ್ರಿಯಾಪಾಕಕರ್ತ್ರೆ ವಿಕರ್ತ್ರೆ ಶರಣ್ಯಾಯ ತಸ್ಮೈ ನತಾ:  ಸ್ಮೋ ನತಾ ಸ್ಮ: ||೩||


ಭಾವಾರ್ಥ:-ರಮಾವಲ್ಲಭನಿಗೆ,ಅಸುರ  ಸಂಹಾರಕನಿಗೆ,ಗರುಢವಾಹನನಿಗೆ,ಪೀತಾಂಬರಧಾರಿಗೆ,ಯಜ್ಞಾದಿ  ಕಾರ್ಯಗಳ ಪ್ರತಿಫಲದಾಯಕನಿಗೆ,ಶರಣರನ್ನು ರಕ್ಷಿಸುವವನಿಗೆ ನಾವು  ನಮಸ್ಕರಿಸುವೆವು.


ನಮೋ ದೈತ್ಯಸಂತಾಪಿತಾಮರ್ತೃ ದು:ಖಾಚಲ ಧ್ವಂಸದಂಭೋಲಯೇ  ವಿಷ್ಣವೇ ತೇ |

ಭುಜಂಗೇಶತಲ್ಪೇಶಯಾರ್ಕ ಚಂದ್ರ ದ್ವಿನೇತ್ರಾಯ ತಸ್ಮೈ ನತಾ:  ಸ್ಮೋ ನತಾ ಸ್ಮ: ||೪||


ಭಾವಾರ್ಥ:-ದೈತ್ಯರ ಉಪಟಳದಿಂದ ಕ್ಷೋಭೆಗೊಳಗಾದ,ಮರ್ತ್ಯರ  ದು:ಖವೆಂಬ ಅತ್ಯುನ್ನತಪ್ರದೇಶವನ್ನು ನಾಶಗೊಳಿಸುವ,ಗರ್ವಗಳಿಗೆ  ಲಯಕಾರಿಯಾಗಿರುವ  ವಿಷ್ಣುವೇ;ಶೇಷಶಾಯಿಯೇ;ಸೂರ್ಯ-ಚಂದ್ರರನ್ನು ಕಣ್ಣುಗಳನ್ನಾಗಿ  ಮಾಡಿಕೊಂಡಿರುವವನೇ ನಿನಗೆ ನಮಸ್ಕರಿಸುವೆವು.

  || ಇತಿ ಸಂಕಷ್ಟನಾಶನ ವಿಷ್ಣುಸ್ತೋತ್ರಮ್ ||

***

  

No comments:

Post a Comment