Thursday 1 July 2021

ಮೃತ್ಯುಂಜಯ ಸ್ತ್ರೋತಂ ಮಾರ್ಕಂಡೇಯ ಋಷಿಃ ವಿರಚಿತಮ್

 for procedure of pooja refer to

click--> ಶನಿ ದೇವ ಶನೈಶ್ಚರ ಜಯಂತಿ shani deva shanaishwara jayanti on vaishakha amavasya

 

ಶ್ರೀ ಮಾರ್ಕಂಡೇಯಕೃತ ಮೃತ್ಯುಂಜಯ ಸ್ತ್ರೋತಂ:

ಓಂಅಸ್ಯಶ್ರೀ ಮೃತ್ಯುಂಜಯ ಸ್ತೋತ್ರ ಮಂತ್ರಸ್ಯ
ಮಾರ್ಕಂಡೇಯ ಋಷಿಃ ಅನುಷ್ಟುಪ್ ಛಂದಃ
ಶ್ರೀರುದ್ರೋದೇವತಾ ಗೌರೀ ಶಕ್ತಿಃ 
ಮಮ ಆರೋಗ್ಯ ವೃಧ್ಯರ್ಥಂ ಅಪಮೃತ್ಯು
ಪರಿಹಾರಾರ್ಥಂ ಚ ಜಪೇ ವಿನಿಯೋಗಃ |

ರತ್ನಸಾನುಶರಾಸನಂ ರಜತಾದಿಶೃಂಗನಿಕೇತನಂ
ಶಿಂಜಿನೀಕೃತಪನ್ನಗೇಶ್ವರ ಮಚ್ಯುತಾನಲಸಾಯಕಮ |
ಕ್ಷಿಪ್ರದಗ್ಧಪುರತ್ರಯಂ ತ್ರಿದಶಾಲಯೈರಭಿ ವಂದಿತಂ
ಚಂದ್ರಶೇಖರಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮ |
ಪಂಚಪಾದಪ ಪುಷ್ಪಗಂಧಿ ಪದಾಂಬುಜದ್ವಯ ಶೋಭಿತಂ 
ಭಾಲಲೋಚನಜಾತಪಾವಕ ದಗ್ಧಮನ್ಮಥವಿಗ್ರಹಮ್ |
ಭಸ್ಮದಾದಿಗ್ಧ ಕಲೇವರಂ ಭವನಾಶಿನಂ ಭವಮವ್ಯಯಂ
ಚಂದ್ರಶೇಖರಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮ |
ಮತ್ತವಾರಣಮುಖ್ಯಚರ್ಮ ಕೃತೋತರೀಯ ಮನೋಹರಂ
ಪಂಕಜಾಸನ ಪದ್ಮಲೋಚನ ಪೂಜಿತಾಂಘ್ರಿ ಸರೋರುಹಮ್ |
ದೇವಸಿದ್ಧತರಂಗಿಣೀಕರ ಸಿಕ್ತಶೀತಲ ಜಟಾಧರಂ
ಚಂದ್ರಶೇಖರಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮ |
ಶರಣಾಗತಿ ಮಂತ್ರಮ್
ನ ಜಾನಾಮಿ ಯೋಗಂ ಜಪಂ ನೈವ ಪೂಜಾಂ
ನತೋಹಂ ಸದಾ ಸರ್ವದಾ ದೇವ ತುಭ್ಯಂ|
ಜರಾಜನ್ಮ ದುಃಖೌಘ ತಾತಪ್ಯಮಾನಂ ಪ್ರಭೋ
ಪಾಹಿ ಪಾಪಾತ್ ನಮಾಮೀಶ ಶಂಭೋ||
***

  || ಶ್ರೀ ಮಹಾ ಮೃತ್ಯುಂಜಯ ಸ್ತೋತ್ರಮ್ ||
    **************
ರುದ್ರಂ ಪಶುಪತಿಂ ಸ್ಥಾಣುಂ ನೀಲಕಂಠಂ ಉಮಾಪತಿಂ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||೧||

ಭಾವಾರ್ಥ:-ರುದ್ರನನ್ನನು,ಪಶುಪತಿಯನ್ನು,ಸ್ಥಿರರೂಪೀಶಿವನನ್ನು,ನೀಲಕಂಠನನ್ನು, ಉಮಾಪತಿಯನ್ನು,ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ?

ಕಾಲಕಂಠಂ ಕಾಲಮೂರ್ತಿಂ ಕಾಲಾಗ್ನಿಂ ಕಾಲನಾಶನಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||೨||

ಭಾವಾರ್ಥ:-ಕಾಲಕಂಠನನ್ನು,ಕಾಲಮೂರ್ತಿಯನ್ನು,ಕಾಲಾಗ್ನಿಯನ್ನು,ಕಾಲನಾಶಕನನ್ನು  ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ?

ವಾಮದೇವಂ ಮಹಾದೇವಂ ಲೋಕನಾಥಂ ಜಗದ್ಗುರುಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||೩||

ಭಾವಾರ್ಥ:-ವಾಮದೇವನನ್ನು,ಲೋಕನಾಥನನ್ನು,ಜಗದ್ಗುರುವನ್ನು,ದೇವದೇವನಾದ ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ?

ದೇವದೇವಂ ಜಗನ್ನಾಥಂ ದೇವೇಶಂ ವೃಷಭಧ್ವಜಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||೪||

ಭಾವಾರ್ಥ:-ದೇವದೇವನಾದಜಗನ್ನಾಥನನ್ನುದೇವೇಶನಾದ ಪರಮಶಿವನನ್ನು,ವೃಷಭಧ್ವಜನನ್ನು,ಮಹಾದೇವನನ್ನುನಾನುಶಿರಸಾನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ?

ಗಂಗಾಧರಂ ಮಹಾದೇವಂ ಶಂಕರಂ ಶೂಲಪಾಣಿನಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||೫||

ಭಾವಾರ್ಥ:-ಗಂಗಾಧರನನ್ನು,ಶಂಕರನನ್ನು, ಶೂಲಪಾಣಿಯನ್ನು ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ?

ಭಸ್ಮೋದ್ಧೂಲಿತಸರ್ವಾಂಗಂ ನಾನಾಹರ್ಣಭೂಷಿತಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||೬||

ಭಾವಾರ್ಥ:-ವಿಭೂತಿಯ ಕಣದಿಂದ ಸರ್ವಾಂಗವೂ ಲೇಪಿತನಾದವನ,ಮತ್ತು ವಿವಿಧಾಭರಣಗಳನ್ನು ಧರಿಸಿಕೊಂಡಿರುವ  ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ?

ಆನಂದಂ ಪರಮಾನಂದಂ ಕೈವಲ್ಯಪದಗಾಮಿನಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||೭||

ಭಾವಾರ್ಥ:-ಆನಂದ ಸ್ವರೂಪನೂ,ಪರಮಾನಂದಕಾರಕನೂ, ಕೈವಲ್ಯಕ್ಕೆ ಹಾದಿ ತೋರುವವನೂ ಆಗಿರುವ  ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ?

ಸ್ವರ್ಗಾಪವರ್ಗದಾತಾರಂ ಸೃಷ್ಟಿಸ್ಥಿತ್ಯಂತಕಾರಿಣಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||೮||

ಭಾವಾರ್ಥ:-ಸ್ವರ್ಗಸುಖದಾಯಕನೂ,ಸೃಷ್ಟಿ ಸ್ಥಿತಿ ಲಯಕಾರಕನೂ ಆಗಿರುವ ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ?

ಪ್ರಲಯಸ್ಥಿತಿಸಂಹಾರಮಾದಿಕರ್ತಾರಮೀಶ್ವರಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||೯||

ಭಾವಾರ್ಥ:-ಪ್ರಲಯ,ಸೃಷ್ಟಿ ನಾಶಗಳಿಗೆ ಕಾರಣನಾಗಿರುವ ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ?

ಸತ್ಯಂ ಸತ್ಯಂ ಪುನ: ಸತ್ಯಮುದ್ಧೃತ್ಯ ಭುಜಮುಚ್ಯತೇ |
ವೇದ ಶಾಸ್ತ್ರಾತ್ ಪರಂ ನಾಸ್ತಿ ನ ದೇವ: ಶಂಕರಾತ್ ಪರ:  ||೧೦||

ಭಾವಾರ್ಥ:-ವೇದಶಾಸ್ತ್ರಗಳಿಂದ ಉತ್ಕೃಷ್ಠವಾಗಿರುವ ತತ್ವಗಳು ಬೇರಾವುದೂ ಇಲ್ಲ.ಅದೇ ರೀತಿಯಾಗಿ ಶಂಕರನಿಗಿಂತ ಬೇರೆಯಾದ ಉನ್ನತ ದೇವ ಇನ್ನೊಬ್ಬನಿಲ್ಲ.

ಮಾರ್ಕಾಂಡೇಯಕೃತಂ ಸ್ತೋತ್ರಂ ಯ: ಪಠೇಚ್ಛಿವಸನ್ನಿಧೌ |
ತಸ್ಯ ಮೃತ್ಯುಭಯಂ ನಾಸ್ತಿ ಅಗ್ನಿಚೋರಭಯಂ ನ ಹಿ  ||೧೧||

ಭಾವಾರ್ಥ:-ಮಾರ್ಕಾಂಡೇಯ ಮಹರ್ಷಿಗಳಿಂದ ರಚಿಸಲ್ಪಟ್ಟ ಈ ಸ್ತೋತ್ರವನ್ನು ಯಾರು ಶಿವ ಸನ್ನಿಧಿಯಲ್ಲಿ ಭಕ್ತಿ ಶ್ರದ್ಧಾಪುರಸರವಾಗಿ ಪಠಿಸುವರೋ ಅಂತವರ ಮೃತ್ಯುಭೀತಿಯು ನಾಶವಾಗುವುದಲ್ಲದೆ ಅಗ್ನಿ ಭಯ,ಚೋರಭಯ ಇತ್ಯಾದಿಯಾದ ನೈಸರ್ಗಿಕ ವಿಕೋಪಗಳಿಂದ ಯಾವ ಭೀತಿಯೂ ಇರುವುದಿಲ್ಲ.

***************
                     || ಇತಿ ಶ್ರೀ ಮಹಾ ಮೃತ್ಯುಂಜಯ ಸ್ತೋತ್ರಮ್ ||
         || ಈ ರೀತಿಯಾಗಿ ಶ್ರೀ ಮಹಾ ಮೃತ್ಯುಂಜಯ ಸ್ತೋತ್ರಗಳ ಭಾವಾರ್ಥವು  ||

***

No comments:

Post a Comment