Friday 20 December 2019

ವಿಷ್ಣು ರಕ್ಷಮಾಂ ರಂಗೇಶ ರವಿಕೋಟಿ ಸಂಕಾಶ ವಿಷ್ಣು ಸ್ತೋತ್ರ ಶ್ರೀಪಾದರಾಜ ವಿರಚಿತಮ್ vishnu stotra by sripadaraja

ಶ್ರೀ ಶ್ರೀಪಾದರಾಯರ ಕೃತಿ

 ರಾಗ ಸಾವೇರಿ        ಖಂಡಛಾಪುತಾಳ 

ರಕ್ಷಮಾಂ ರಂಗೇಶ ॥
ರಕ್ಷಮಾಂ ರಂಗೇಶ ರವಿಕೋಟಿ ಸಂಕಾಶ ।
ಪಕ್ಷಿವಾಹನ ಶ್ರೀಶ ಭವ್ಯಗುಣಕೋಶ ॥ ಪ ॥

ಅಕ್ಷರಾದಿ ಪಿಪೀಲಿಕಾಂತ ಸಂರಕ್ಷಕಾಮಯ ಹರಣ 
ಸರ್ವ ಲಕ್ಷಣ ಪರಿಪೂರ್ಣ ಪರಮೇಶ ದಕ್ಷಿಣಾಧೀಶ ॥ ಅ ಪ ॥

ಕಮಲದಳ ನೇತ್ರ ಕಮಲಾರಿ ಸಮವಕ್ತ್ರ 
ಕಮಲವಿರಚಿತ ಸ್ತೋತ್ರ ಕರಧೃತ ಗೋತ್ರ 
ಕಮಲಜನುತಿ ಪಾತ್ರ ಕರಿರಾಜ ಯಾತ್ರ ॥
ಕಮಲಧರ ಕರಕಮಲ ಸಮಪದ 
ಕಮಲ ಸನ್ನಿಭ ವಿನುತ ಕಂಧರ 
ಕಮಲ ಸನ್ನಿಭ ಸುಗಾತ್ರ ಕಮಲಾ ಕಳತ್ರ ॥ 1 ॥

ಅನಿಮಿಷ ಸುಪ್ರೀತ ಅಖಿಳ ದೋಷ ನಿರ್ಧೂತ 
ಸನಕಾದಿ ಶೃತಿಗೀತ ಅರ್ಜುನ ಸೂತ 
ದಿನಮಣಿಕುಲಜಾತ ದೇವಕೀ ಪೋತ ॥
ಕನಕವಸನ ಕಿರೀಟಧರ ಕೋ-
ಕನದ ಹಿತ ಕಮಲಾಪ್ತ ನಯನ 
ವನದವಾಹನ ವೈರಿಕುಲಘಾತ ವನಜಭವತಾತ ॥ 2 ॥

ಅಂಗನಾಂಬರ ಹರಣ ಅನುಪಮ ಸಪ್ತಾವರಣ 
ಮಂಗಳಕರ ಚರಣ ಭಕ್ತಸಂರಕ್ಷಣ 
ಗಾಂಗೇಯ ಕೃತಸ್ಮರಣ ಕರುಣಾಭರಣ ॥
ರಂಗವಿಠಲ ಭುಜಂಗಶಯನ ಕು -
ರಂಗಧರ ಕಾವೇರಿ ತೀರ ಶ್ರೀ -
ರಂಗನಿಲಯ ತುರಂಗ ಸಂಚರಣ ಗಂಗಾಚರಣ ॥ 3 ॥
************


No comments:

Post a Comment