Monday 30 September 2019

ನೃಸಿಂಹ ನಖ ಸ್ತುತಿಃ ಮಧ್ವಾಚಾರ್ಯ ವಿರಚಿತಮ್ nrusimha nakha stutih part of vayu stutih by madhwacharya


ಶ್ರೀನರಸಿಂಹ-ನಖ-ಸ್ತುತಿಃ

ಪಾಂತ್ವಸ್ಮಾನ್ ಪುರುಹೂತ-ವೈರಿ-ಬಲವನ್-ಮಾತಂಗ-ಮಾದ್ಯದ್-ಘಟಾ-
ಕುಂಭೋಚ್ಚಾದ್ರಿ-ವಿಪಾಟನಾಧಿಕ-ಪಟು-ಪ್ರತ್ಯೇಕ-ವಜ್ರಾಯಿತಾಃ |
ಶ್ರೀಮತ್-ಕಂಠೀರವಾಸ್ಯ-ಪ್ರತತ-ಸು-ನಖರಾ ದಾರಿತಾರಾತಿ-ದೂರ-
ಪ್ರಧ್ವಸ್ತ-ಧ್ವಾಂತ-ಶಾಂತ-ಪ್ರವಿತತ-ಮನಸಾ ಭಾವಿತಾ ನಾಕಿವೃಂದೈಃ (ಭೂರಿ-ಭಾಗೈಃ) || ೧ ||

ಲಕ್ಷ್ಮೀ-ಕಾಂತ ಸಮಂತತೋಽಪಿ ಕಲಯನ್ ನೈವೇಶಿತುಸ್ತೇ ಸಮಂ
ಪಶ್ಯಾಮ್ಯುತ್ತಮ-ವಸ್ತು ದೂರ-ತರತೋಽಪಾಸ್ತಂ ರಸೋ ಯೋಽಷ್ಟಮಃ |
ಯದ್-ರೋಷೋತ್ಕರ-ದಕ್ಷ-ನೇತ್ರ-ಕುಟಿಲ-ಪ್ರಾಂತೋತ್ಥಿತಾಗ್ನಿ-ಸ್ಫುರತ್-
ಖದ್ಯೋತೋಪಮ-ವಿಸ್ಫುಲಿಂಗ-ಭಸಿತಾ ಬ್ರಹ್ಮೇಶ-ಶಕ್ರೋತ್ಕರಾಃ || ೨ ||

|| ಇತಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯವಿರಚಿತಂ ಶ್ರೀನರಸಿಂಹನಖಸ್ತುತಿಃ ಸಂಪೂರ್ಣಾ ||
*****
ನಖಸ್ತುತಿಯ ಫಲಶ್ರುತಿ --- ಸಕಲಅನಿಷ್ಟನಿವಾರಣೆ ಹಾಗೂ ಸಕಲಾಭೀಷ್ಟ ಸ೦ಪ್ರಾಪ್ತಿ

1. ಶ್ರೀಮದ್ವಿಷ್ಣ್ವ೦ಘ್ರಿನಿಷ್ಠ --- ವಿದ್ಯಾಸಿದ್ಧಿ.
2. ಉತ್ಕ೦ಠಾಕು೦ಠ   --- ಪ್ರಜ್ಞಾಸಿದ್ಧಿ.
3. ಜನ್ಮಾಧಿವ್ಯಾಧ್ಯುಪಾಧಿ --- ರೋಗನಿವೃತ್ತಿ.
4. ಅಸ್ಯಾವಿಷ್ಕರ್ತುಕಾಮ೦ --- ಮ೦ತ್ರಸಿದ್ಧಿ.
5. ಉದ್ಯದ್ವಿದ್ಯುದ್ಪ್ರಚ೦ಡಾ೦ --- ಬುದ್ಧಿಪ್ರಾಪ್ತಿ.
6. ಸ೦ಸಾರೋತ್ತಾಪ --- ಸ೦ತಾಪನಿವೃತ್ತಿ.
7. ಮೂರ್ಧನ್ಯೇಷೋ --- ಬ೦ಧಮುಕ್ತಿ.
8. ಸಾಭ್ರೋಷ್ಣಾಭೀಶು ---ಉನ್ಮಾದಪರಿಹಾರ.
9. ಯೇಮು೦ ಭಾವ೦ --- ಸುಖದಾ೦ಪತ್ಯ.
10. ಆನ೦ದಾನ್ --- ಆನ೦ದಪ್ರಾಪ್ತಿ.
11. ಉತ್ತಪ್ತಾತ್ಯುತ್ಕಟತ್ವಿಟ್---ಶತ್ರುಜಯ.
12. ಅಸ್ಮಿನ್ನಸ್ಮದ್ಗುರೂಣಾ೦---ಕ್ಲೇಶನಿವೃತ್ತಿ.
13. ಕ್ಷುತ್ಕ್ಷಾಮಾನ್ ---ದಾರಿದ್ರ್ಯ ನಿವೃತ್ತಿ.
14. ಮಾತರ್ಮೇ---ಭಕ್ತಿಸಿದ್ಧಿ.
15. ಮಿಷ್ಣೋರತ್ಯುತ್ತಮತ್ವಾತ್ ---ಜ್ಞಾನಪ್ರಾಪ್ತಿ.
16. ತತ್ತ್ವಜ್ಞಾನ್---ಮೋಕ್ಷಸಾಧನಪ್ರಾಪ್ತಿ.
17. ವ೦ದೇಽಹ೦ ತ೦--- ಪೌರುಷಾಸಿದ್ಧಿ.
18. ಪ್ರಾಕ್ ಪ೦ಚಾಶತ್ --- ಔಷಧಿಸಿದ್ಧಿ.
19. ಕ್ಷಿಪ್ತಃಪಶ್ಚಾತ್ --- ಗುರಿಸಾಧನೆ.
20. ದೃಷ್ಟ್ವಾದುಷ್ಟಾಧಿ---ಸ೦ಗ್ರಾಮವಿಜಯ.
21. ದೇವ್ಯಾದೇಶ --- ಅಪೂರ್ವಕಾರ್ಯಸಿದ್ಧಿ.
22. ಜಘ್ನೇ ನಿಘ್ನೇನ --- ವಿಘ್ನಪರಿಹಾರ.
23. ನಿರ್ಮೃದ್ನನ್ನತ್ಯಯತ್ನ೦ ---ಸ೦ಕಷ್ಟನಿವೃತ್ತಿ.
24. ಕ್ಷ್ವೇಲಾಕ್ಷೀಣಾ ---- ಅಧಿಕಾರಪ್ರಾಪ್ತಿ.
25. ದ್ರುಹ್ಯ೦ತೀ೦--- ಕವಿತ್ವಸಿದ್ಧಿ.
26. ಯಾಭ್ಯಾ೦ ಶುಶ್ರೂಷುಃ--- ಗುರ್ವನುಗ್ರಹ.
27. ಗಚ್ಛನ್ಸೌಗ೦ಧಿಕಾರ್ಥ೦---ಮೋಹನಾಶ.
28. ಬಹ್ವೀಕೋಟಿರ --- ವಾದಿಜಯ.
29. ದೇಹಾದುತ್ಕ್ರಾ ---ಅಜ್ಞಾನನಿವೃತ್ತಿ.
30. ತದ್ದುಷ್ಪ್ರೇಕ್ಷಾನು --- ವಿದ್ಯಾಪ್ರಾಪ್ತಿ.
31. ಆಕ್ರೋಶ೦ತೋ ---ಭೂತಪೀಡಾನಿವೃತ್ತಿ.
32. ತ್ರಿಷ್ವಪ್ಯೇವಾವ --- ಅಪಮೃತ್ಯುನಿವೃತ್ತಿ.
33. ಉದ್ಯನ್ಮ೦ದ --- ರೂಪಲಾವಣ್ಯಪ್ರಾಪ್ತಿ.
34. ಪ್ರಾಚೀನಾಚೀರ್ಣ---ಶ್ರವಣಾದಿಯೋಗ.
35. ಪೀಠೇ ರತ್ನೋಪ ---ಐಶ್ವರ್ಯಪ್ರಾಪ್ತಿ.
36. ಸಾನುಕ್ರೋಶೈಃ --- ಹರ್ಯನುಗ್ರಹ.
37. ಅಸ್ತವ್ಯಸ್ತ೦ --- ನಷ್ಟವಸ್ತುಪ್ರಾಪ್ತಿ.
38. ಆಜ್ಞಾಮನ್ಯೈಃ --- ಅಸಾಧ್ಯಕಾರ್ಯಸಿದ್ಧಿ.
39. ಭೂತ್ವಾ ಕ್ಷೇತ್ರೇ --- ಸ೦ತತಿಪ್ರಾಪ್ತಿ.
40. ವ೦ದೇ ತ೦ ತ್ವಾ--- ಪುರುಷಾರ್ಥಸಿದ್ಧಿ.
41. ಸುಬ್ರಹ್ಮಣ್ಯಾಖ್ಯ--- ಗ್ರಹದೋಷನಿವೃತ್ತಿ.
ಆಚಾರ್ಯ ಮಧ್ವರ ಸಾಕ್ಷಾತ್ ಶಿಷ್ಯರು, ಅಂತರಂಗ ಭಕ್ತರು ಆದ ತ್ರಿವಿಕ್ರಮಪಂಡಿತರಿಗೆ ದೃಷ್ಟವಾದ ಈ ಕೃತಿ ಆಚಾರ್ಯರ ಅನುಗ್ರಹಕ್ಕೆ ಪಾತ್ರವಾಗಿದೆ. ಪ್ರತೀತಿಯಂತೆ ಆಚಾರ್ಯರನ್ನು ಅವತಾರತ್ರಯ ಸ್ವರೂಪಗಳಲ್ಲಿ ತ್ರಿವಿಕ್ರಮಪಂಡಿತರು ಕಂಡಾಗ ಹೊರಹೊಮ್ಮಿದೆ ಈ ಮಂತ್ರಸ್ತುತಿ. ಒಮ್ಮೆ ಆಚಾರ್ಯರು ಪೂಜೆಯಲ್ಲಿ ನಿರತರಾಗಿರುವಾಗ, ಕಾಲವು ಬಹಳವಾಗಲು, ತ್ರಿವಿಕ್ರಮಪಂಡಿತರು ಪೂಜಾಗ್ರಹದಲ್ಲಿ ಇಣುಕಿ ನೋಡಿದರು. ಆಗ ಅವರಿಗೆ ಅದ್ಭುತ ಅವತಾರತ್ರಯ ಸ್ವರೂಪಗಳು ತಮ್ಮ ಇಷ್ಟ ದೈವತಗಳನ್ನು ಅರ್ಚಿಸುತ್ತಿರುವುದು ಕಂಡಿತು (ಹನುಮರೂಪದಿಂದ ರಾಮಚಂದ್ರ, ಭೀಮರೂಪದಿಂದ ಕೃಷ್ಣ, ಮಧ್ವರೂಪದಿಂದ ವೇದವ್ಯಾಸ). ಈ ಸಾಕ್ಷಾತ್ಕಾರದ ಪ್ರತಿರೂಪವಾಗಿ ವಾಯುಸ್ತುತಿ ರಚಿತವಾಯಿತು.  ತ್ರಿವಿಕ್ರಮಪಂಡಿತರು ಆಚಾರ್ಯರ ಅಂತರಂಗ ಭಕ್ತರಾಗಿದ್ದು ಅವರ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾಗಿದ್ದವರಾಗಿದ್ದರು, ಆದ್ದರಿಂದ ಅವರಿಗೆ ಆ ಸ್ವರೂಪಗಳ ಅನುಷ್ಟಾನ, ದರ್ಶನ ನಿರಂತರವಾಗಿದ್ದುದು ಸಹಜ. ಈ ಸ್ತುತಿಯನ್ನು ಆಚಾರ್ಯರಿಗೆ ತೋರಿಸಲಾಗಿ, ಆಚಾರ್ಯರು ಈ ಸ್ತುತಿ ಕೇವಲ ತನ್ನ ಸ್ತುತಿಯಾಗಿರುವುದು ಬೇಡವೆಂದು ಅದಕ್ಕೆ ಸಂಪುಟಾಕಾರವಾಗಿ ನರಸಿಂಹನ ನಖಗಳ ಪ್ರಾರ್ಥನಾರೂಪವಾಗಿ ನಖಸ್ತುತಿಯನ್ನು ಅನುಗ್ರಹಿಸಿದರು. ಈ ರೀತಿ ವಾಯುಸ್ತುತಿಯ ಆದ್ಯಂತಗಳಲ್ಲಿ ನಖಸ್ತುತಿಯ ಪಾರಾಯಣ ವಿದಿತ, ಇದಕ್ಕೆ ಆ ಸಿಂಹರೂಪಿ ಪರಮಾತ್ಮನೇ ಶ್ರೀರಕ್ಷೆ. ಆದ್ದರಿಂದ ಇದನ್ನು ಶ್ರೀಹರಿವಾಯುಸ್ತುತಿಯೆಂದು ಕರೆಯಲಾಗುತ್ತದೆ.  ಹಿರಿಯರು, ಜ್ಞಾನಿಗಳು ವಾಯುಸ್ತುತಿಯ ಪ್ರತಿಪದ್ಯಕ್ಕು ಒಂದು ವಿಶೇಷ ಫಲಪ್ರಾಪ್ತಿಯನ್ನು ಸೂಚಿಸಿದ್ದಾರೆ ಅವುಗಳ ಬಗ್ಗೆ ಮೇಲೆ ವಿವರಿಸಲಾಗಿದೆ.

|| ಶ್ರೀಭಾರತೀರಮಣ ಮುಖ್ಯಪ್ರಾಣಾ೦ತರ್ಗತ ಶ್ರೀಕೃಷ್ಣಾರ್ಪಣಮಸ್ತು ||
****

No comments:

Post a Comment